ಮಂಗಳೂರು: ವಿವಿಧ ಕಾಯಿಲೆಗಳಿಂದ ಬಳಲುವ ಅರ್ಜಿದಾರರಿಗೆ ಕರ್ನಾಟಕ ರಾಜ್ಯದ ಮಾನ್ಯಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಾನ್ಯ ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ರವರ ಮನವಿಯ ಮೇರೆಗೆ, ಹಾಜಿರ ಮಂಗಳೂರು ಇವರಿಗೆ ರೂ.1.75ಲಕ್ಷ, ನೌಶಿರ ಜೆಪ್ಪು ಮಹಾಕಾಳಿ ಪಡ್ಪು ಇವರಿಗೆ ರೂ. 90,989/-, ಚಿತ್ತರಂಜನ್ ಜೆ. ಅತ್ತಾವರ ಇವರಿಗೆ ರೂ. 81,907/-,ಅನ್ವರ್ ಹುಸೇನ್ ಮಯ್ಯದಿ ಕಾವೂರು ಇವರಿಗೆ ರೂ. 70,000/-,ಉಮೇಶ್ಚಂದ್ರ ಮಲ್ಲೂರು ಇವರಿಗೆ 52,895/-, ಎಂ.ರಾಜೇಂದ್ರ  ಜೆಪ್ಪು ಬಪ್ಪಾಲ್ ಇವರಿಗೆ 39,399/-,ಸುರೇಂದ್ರ ಭಂಡಾರಿ ಕಾವೂರು. ಇವರಿಗೆ ರೂ. 28,811/- ನಸೀಮಾ ಭಾನು ಬಂಟ್ವಾಳ  ಇವರಿಗೆ ರೂ. 20,470/-, ಪರಿಹಾರ ಧನದ ಬಿಡುಗಡೆ ಪತ್ರವನ್ನು ಮಹಾನಗರ ಪಾಲಿಕೆ ವಿಧಾನ ಪರಿಷತ್ ಶಾಸಕರ ಕಛೇರಿಯಲ್ಲಿ ಹಸ್ತಾಂತರಿಸಲಾಯಿತು.

ರೋಹನ್ ಕಾರ್ಪೋರೇಶನ್ ಮುಖ್ಯಸ್ಥರಾದ ರೋಹನ್ ಮಾಂತೆರೋ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ನೀತು ಡಿಸೋಜಾ, ಮಾಜಿ ಮ.ನ.ಪ ನಾಮ ನಿರ್ದೇಶನ ಸದಸ್ಯರಾದ ಸತೀಶ್ ಪೆಂಗಲ್, ಕಾಂಗ್ರೆಸ್ ನಾಯಕರಾದ ಸಿರಾಜ್ ಬಜಪೆ, ಅಬೂಬಕ್ಕರ್ ಸಿದ್ದಿಕ್, NSUI ಜಿಲ್ಲಾ ಉಪಾಧ್ಯಕ್ಷರಾದ ಕೀರ್ತನ್ ಗೌಡ ಉಪಸ್ಥಿತಿ ಇದ್ದರು.