ಮೂಡುಬಿದಿರೆ:  ಸೆಪ್ಟೆಂಬರ್ 16 ರಂದು ಭಾರತೀಯ ಕಥೋಲಿಕ ಯುವ ಸಂಚಲನ ಮೂಡುಬಿದಿರೆ ವಲಯ ಹಾಗೂ ಪರಿಸರದ ಹಲವು ಪ್ರತಿಷ್ಠಿತ ಸಂಘಟನೆಗಳ ಸಹಯೋಗದಲ್ಲಿ ಮಾತೆ ಮಾರಿಯಮ್ಮನ ಜನ್ಮದಿನದ ಅಂಗವಾಗಿ ‘ಸರ್ವಧರ್ಮಿಯರೊಂದಿಗೆ ತೆನೆ ಹಬ್ಬ’ ಸುವರ್ಣ ಮಂದಿರದಲ್ಲಿ ಆಚರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅತೀ ವಂದನೀಯ ಗುರು ಒನಿಲ್ ಡಿಸೋಜ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ವಲಯದ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ ಜಿ ಹಾಜರಿದ್ದರು, ಕಥೋಲಿಕ್ ಸಭಾ ಮೂಡುಬಿದಿರೆ ವಲಯದ ಅಧ್ಯಕ್ಷ  ಅವಿಲ್ ಡಿಸೋಜ,ರೊಟರಾಕ್ಟ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷ ಫರಾಜ್, ರೋಟರಿ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷರು ರೊ.ನಾಗಾರಾಜ್ ಬಿ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟಾವ್ನ್ ಪರವಾಗಿ ರೊ.ಪೂರ್ಣಚಂದ್ರ, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ ಟಾವ್ನ್ ಇದರ ಅಧ್ಯಕ್ಷರು ರೊ.ಮಹೇಂದ್ರ,ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ ಅನ್ನ್ ಸರಿತಾ ಆಶೀರ್ವಾದ್, ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷರು ಲ.ಜೊಸ್ಸಿ ಮಿನೇಜಸ್, ಲಯನ್ಸ್ ಕ್ಲಬ್ ಅಲಂಗಾರು ಇದರ ಅಧ್ಯಕ್ಷರು ಲಾಯ್ಡ್ ರೇಗೊ, ಯುವ ಕೊಂಕಣಿ ಅಸೋಸಿಯೇಷನ್ ಇದರ ಅಧ್ಯಕ್ಷರು ಅನಿಷ್ ಡಿಸೋಜ,ಜೆ.ಸಿ.ಐ ತ್ರಿಭುವನ್ ಇದರ  ಅಧ್ಯಕ್ಷರು ಸುನಿಲ್ ಕುಮಾರ್ ಹಾಗೂ ಐ.ಸಿ.ವೈ.ಎಮ್ ಮೂಡುಬಿದಿರೆ ವಲಯದ ಅಧ್ಯಕ್ಷ ಬ್ರೆಂಡನ್ ಕುಟಿನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಮಾರು 180 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.