ಧರ್ಮಸ್ಥಳ: ನವರಾತ್ರಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶುಕ್ರವಾರ ಬೆಂಗಳೂರಿನ ಡಾ. ಅರ್ಚನಾ ಕುಲಕರ್ಣಿ, ಸಿದ್ಧಯ್ಯ, ಹಾಗೂ ಗುಂಡಪ್ಪ ಸಂಗೀತ ಕಾರ್ಯಕ್ರಮ ನೀಡಿದರು.

ಕೀಬೋರ್ಡ್ ವಾದಕರಾಗಿ ವೆಂಕಟೇಶ್, ರಿದಂಪ್ಯಾಡ್ ವಾದಕರಾಗಿ ಪ್ರಸಾದ್, ತಬಲಾ ವಾದಕರಾಗಿ ಕ್ಷೀರಲಿಂಗ ತಾಳದಲ್ಲಿ ಸೂರ್ಯನಾರಾಯಣ, ಸಹಕರಿಸಿದರು.

ಅದೇ ಸಂದರ್ಭದಲ್ಲಿ ದಿವ್ಯಾನಿಧಿ ರೈ, ಎರುಂಬು ಹಾಗೂ ಬೆಂಗಳೂರಿನ  ಹೊಂಬೇಗೌಡ ಸಂಗೀತ ಕಾರ್ಯಕ್ರಮ ನೀಡಿದರು.  ಹಿನ್ನೆಲೆಯಲ್ಲಿ ತಬಲ ವಾದಕರಾಗಿ  ಸುಹಾಸ್ ಹೆಬ್ಬಾರ್, ಪುತ್ತೂರು, ಕೊಳಲು ವಾದಕರಾಗಿ  ಸಮರ್ಥ್, ಮಂಗಳೂರು ಸಹಕರಿಸಿದರು.