ಅಮೆರಿಕ ಸಂಯುಕ್ತ ಸಂಸ್ಥಾನದ ಉತ್ತರ ಭಾಗದ ಎಂಬೆಸಿ ಸೂಟ್ಸ್ ಹೋಟೆಲಿನಲ್ಲಿ ನಡೆದ ನಾವಿಕ ಕನ್ನಡ ಸಮ್ಮೇಳನ ನಿಧಾನವಾಗಿ ದೊಡ್ಡ ಸುದ್ದಿ ಮಾಡುತ್ತಿದೆ. ನಾವಿಕ ಎನ್ನುವುದು ಯುಎಸ್ಎ ಬಡಗಣ ಭಾಗದ ಕನ್ನಡಿಗರ ಸಂಘಟನೆಯಾಗಿದೆ. ಇದೇ ಮೊದಲ ಬಾರಿಗೆ ಇ ಸಮ್ಮೇಳನವನ್ನೂ ಯಶಸ್ವಿ ಮಾಡಲಾಗಿದೆ.
ನಟ ಶಿವರಾಜಕುಮಾರ್, ಗೀತಾ ದಂಪತಿ ಮೊದಲಾದವರು ಭಾಗವಹಿಸಿದರು. ಅರ್ಜುನ್ ಜನ್ಯ ಸಂಗೀತದಲ್ಲಿ ಶಿವರಾಜಕುಮಾರ್ ಹಾಡಿ ಕುಣಿದು ರಂಜಿಸಿದರು. ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ಆಸ್ಟಿನ್ ಕನ್ನಡ ಸಂಘದವರು ತುಳು ಅಯ್ಸಿರ ಕಾರ್ಯಕ್ರಮ ನೀಡಿದರು.
ಉಪ ಮುಖ್ಯಮಂತ್ರಿ ಡಿಕೆಶಿ ಸಹಿತ ಹಲವಾರು ಕನ್ನಡಿಗರು ವೀಡಿಯೋ ಸಂದೇಶ ಕಳುಹಿಸಿದ್ದರು. ಕರ್ನಾಟಕ ಸರಕಾರದ ಪರವಾಗಿ ಸಿದ್ದಲಿಂಗೇಶ್ ಭಾಗವಹಿಸಿದ್ದರು.
ಹಾಲಿ ನಾವಿಕ ಅಧ್ಯಕ್ಷರಾದ ಮಂಜುನಾಥ ರಾವ್ ಅವರು ಮುಂದಿನ ಅಧ್ಯಕ್ಷರಾದ ಶಿವಕುಮಾರ್ ಬೆಂಗಳೂರು ಅವರಿಗೆ ಕುರ್ಚಿ ಬಿಟ್ಟುಕೊಟ್ಟರು.