ಕಾರ್ಕಳ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ) ದಕ್ಷಿಣ ಕನ್ನಡ -ಉಡುಪಿ ಜಿಲ್ಲೆಯ ಕಾರ್ಕಳ ವಲಯದ 2025-27 ರ ನೂತನ ಅಧ್ಯಕ್ಷರಾಗಿ ಮುನಿಯಾಲಿನ ಪ್ರಮೋದ್ ಚಂದ್ರ ಪೈ ಇವರು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ. 

ಹಾಗೂ ಸಂಘದ ಪದಾಧಿಕಾರಿಗಳಲ್ಲಿ, ಗೌರವಾಧ್ಯಕ್ಷರಾಗಿ ಟಿ. ವಿ. ಸುಶೀಲ್ ಕುಮಾರ್, ಉಪಾಧ್ಯಕ್ಷರಾಗಿ ಪ್ರಕಾಶ್ ಪ್ರಭು ಮೂರೂರು, ಕಾರ್ಯದರ್ಶಿಗಳಾಗಿ ಶೇಖರ್ ಹನಿ ಕುಕ್ಕುಜೆ, ಜೊತೆ ಕಾರ್ಯದರ್ಶಿಗಳಾಗಿ ಸುಜಿತ್ ಅಂಚನ್ ಬಜಗೋಳಿ, ಕೋಶಾಧಿಕಾರಿಗಳಾಗಿ ವಿ. ಆರ್. ಸತೀಶ್ ಆಚಾರ್ಯ ವರಂಗ, ಕ್ರೀಡಾ ಕಾರ್ಯದರ್ಶಿಗಳಾಗಿ ಸುಶಾಂತ್ ಕಿಯಾರ ಕಾರ್ಕಳ, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಅಶ್ವಥ್ ಸಾಣೂರು, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರಸನ್ನ ಐಸಿರ ಕುಕ್ಕುಂದೂರು, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರಣಮ್ ಜೈನ್, ಛಾಯಾ ಕಾರ್ಯದರ್ಶಿಗಳಾಗಿ ಸಂತೋಷ್ ಶೆಟ್ಟಿ ಕಾರ್ಕಳ, ಮಾಧ್ಯಮ ಪ್ರತಿನಿಧಿಯಾಗಿ ಸತೀಶ್ ಹೆಗ್ಡೆ ಕಡ್ತಲ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ಕಮಲಾಕ್ಷ  ಪ್ರಭು ಕಾಡುಹೊಳೆ, ವಿಜಯ್ ಹನಿ ಕುಕ್ಕುಜೆ, ಪ್ರಶಾಂತ್ ಬಜಗೋಳಿ, ಹರೀಶ್ ಓಂಕಾರ್ ಬಜಗೋಳಿ, ವಿಠ್ಠಲ್ ಅಮೀನ್ ಕಾರ್ಕಳ, ಸುದರ್ಶನ್ ಸಾಣೂರು, ಸೀತಾರಾಮ್ ಸಾಣೂರು, ಸುರೇಶ ಪಂಚಮಿ ಬಜಗೋಳಿ ಹಾಗೂ ಸುಭಾಸ್ ಬಜಗೋಳಿ ಇವರು ಆಯ್ಕೆ ಆಗಿರುತ್ತಾರೆ.