ಬೆಂಗಳೂರಿನ ಐಐಎಸ್ಸಿ- ಭಾರತೀಯ ವಿಜ್ಞಾನ ಸಂಸ್ಥೆಯು ಹೆಚ್ಚು ಸಾಮರ್ಥ್ಯದ ಲಸಿಕೆ ಮತ್ತು ಆಮ್ಲಜನಕ ತಯಾರಿಸುವುದಾಗಿ ನಿರ್ದೇಶಕ ಗೋವಿಂದನ್ ರಂಗರಾಜನ್ ತಿಳಿಸಿದರು.
ಅವರು ಕರ್ನಾಟಕದ ಆರೋಗ್ಯ ಮಂತ್ರಿ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ.
ಮಾಮೂಲು ಆಮ್ಲಜನಕ ದ್ರಾವಕಗಳು ನಿಜವಾಗಿ 50%ದಷ್ಟು ಮಾತ್ರ ಆಮ್ಲಜನಕ ಒದಗಿಸುತ್ತವೆ. ಐಐಎಸ್ಸಿ ತಯಾರಿಸುವ 10 ಎಲ್ಎಂಪಿ ಸಾಂದ್ರತೆಯ ದ್ರಾವಕವು 90% ಆಮ್ಲಜನಕ ಒದಗಿಸುವುದಾಗಿ ಅವರು ವಿವರಿಸಿದರು.
ಲಸಿಕೆ ತಯಾರಿಕೆ ಮುಂದುವರಿದಿದ್ದು ಅದರ ಗುಣಮಟ್ಟದ ಉತ್ಕೃಷ್ಟತೆ ಬಗೆಗೆ ಮತ್ತಷ್ಟು ನಿಗಾ ಇಡಲಾಗಿದೆ ಎಂದೂ ಅವರು ತಿಳಿಸಿದರು.