ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರನ್ನು ಬದಲಾಯಿಸದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಸರ್ವನಾಶ ಖಚಿತ. ಮಗನಿಗಾಗಿ‌ ಯಡಿಯೂರಪ್ಪ ರಾಜ್ಯ ಲೂಟಿ ಮಾಡುತ್ತಿದ್ದಾರೆ ಎಂದು ಶಾಸಕ, ಬಿಜೆಪಿ ನಾಯಕ ಬಸವರಾಜ ಯತ್ನಾಳ ಹೇಳಿದರು.

ದುರ್ಯೋಧನನಿಗೆ ಭೀಷ್ಮ, ದ್ರೋಣರ ಬೆಂಬಲವಿದ್ದಂತೆ ಯಡಿಯೂರಪ್ಪರನ್ನೂ ಕೆಲವರು ಬೆಂಬಲಿಸುತ್ತಿದ್ದಾರೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಅವರು ‌ದೇವಿಯಲ್ಲೂ‌ ಭ್ರಷ್ಟಾಚಾರಿಗಳನ್ನು ನಾಶ ಮಾಡು ಎಂದು ಬೇಡಿಕೊಂಡೆ ಎಂದೂ ಯತ್ನಾಳ ‌ಹೇಳಿದರು.

ಕೆಲವು ಲಿಂಗಾಯತ ಮಠಾಧೀಶರು ಯಡಿಯೂರಪ್ಪರ ಭಿಕ್ಷೆ ಕಾಸಿನ ಮುಲಾಜಿನಲ್ಲಿ ಇದ್ದಾರೆ. ಇದು ಲೂಟಿ ಸರಕಾರ. ಯಡಿಯೂರಪ್ಪ ಎಲ್ಲರ ನಾಯಕತ್ವ ನಾಶ ಮಾಡಿ ಕಳ್ಳ ಹಣ ಮಾತ್ರ ಮಾಡಿದ್ದಾರೆ ಎಂದು ಅವರು ಆಪಾದಿಸಿದರು.