ಪುತ್ತೂರು : ಪುತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಹಿರಿಯ ಕವಿ ಅಬ್ದುಲ್ ಸಮದ್ ಬಾವ ಅವರು ನೇಮಕಗೊಂಡಿದ್ದಾರೆ.  ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇತ್ತೀಚೆಗೆ ಮಂಗಳೂರಿನಲ್ಲಿ ಏರ್ಪಡಿಸಿದ್ದ 'ಕಾವ್ಯ ಸಂಚಯ, ಕಥಾ ಸಮಯ, ಸನ್ಮಾನ ಮತ್ತು ಕೃತಿ ಬಿಡುಗಡೆ' ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಜಿಲ್ಲಾ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರ ಶಿಫಾರಸ್ಸಿನಂತೆ ನೇಮಕ ಮಾಡಿ ಘೋಷಣೆ ಮಾಡಿದರು.