ಮಂಗಳೂರು : ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜದ ಗುರುವರ್ಯರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು* (ಶ್ರೀ ಜ್ಞಾನೇಶ್ವರೀ ಪೀಠ, ದೈವಜ್ಞ ಬ್ರಾಹ್ಮಣ ಮಠ, ಶ್ರೀ ಕ್ಷೇತ್ರ ಕರ್ಕಿ. ಹೊನ್ನಾವರ. ) ಮಂಗಳೂರು ಮಹಾನಗರಕ್ಕೆ ಚಿತ್ತೈಸಲಿರುವರು.
ಆ ಪ್ರಯುಕ್ತ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ (ರಿ.), ದೈವಜ್ಞ ಮಹಿಳಾ ಮಂಡಳಿ ರಿ. ದೈವಜ್ಞ ಚಿನ್ನ ಬೆಳ್ಳಿ ಕೆಲಸಗಾರರ ಸಂಘ ರಿ. ದೈವಜ್ಞ ಯುವಕ ಮಂಡಳಿ ರಿ. ಇವರ ಆಶ್ರಯದಲ್ಲಿ ತಾರೀಕು 3. 7. 2022 ರವಿವಾರ ಬೆಳಿಗ್ಗೆ-- 10 :00 ಗಂಟೆಗೆ ಅಶೋಕ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ *ಗುರುವಂದನಾ* ಮತ್ತು *ಪಾದುಕಾ ಪೂಜೆ* ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದೈವಜ್ಞ ಶ್ರೀ ಶ್ರೀ ಗಳವರು ದಿವ್ಯ ಸಾನಿಧ್ಯ ವಹಿಸುವರು. ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀ ಆರ್. ಎಂ. ರೇವಣ್ಕರ್, ನೂತನ್ ಇಂಡಿಯನ್ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ನ ಶ್ರೀ ನಾಗರಾಜ ಶೇಟ್, ಹಾಗೂ ಮಂಗಳೂರು ದೈವಜ್ಞ ಬ್ರಾಹ್ಮಣ ಸಂಘ -- ಸಂಸ್ಥೆಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿರುವರು.