ಮಂಗಳೂರಿನಲ್ಲಿ ಏ.14ರಂದು ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋದಲ್ಲಿ ಮೋದಿ ಅವರ ತೈಲಚಿತ್ರ ಬಿಡಿಸಿ ಪ್ರಧಾನಿಗೆ ಅರ್ಪಿಸಿದ ತೊಕ್ಕೊಟ್ಟಿನ ಕಲಾವಿದ ಕಿರಣ್‌ ಅವರನ್ನು ಇಂದು ಬಿಜೆಪಿ ಚುನಾವಣಾ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ಶಾಲು ಹೊದೆಸಿ ಸನ್ಮಾನಿಸಿದರು.

ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಚುನಾವಣಾ ಸಂಚಾಲಕರಾದ ನಿತಿನ್ ಕುಮಾರ್, ಸಾಮಾಜಿಕ ಜಾಲತಾಣದ ಸಂಚಾಲಕರಾದ ಧೀರೇಶ್ ಉಪಸ್ಥಿತರಿದ್ದರು.