ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ ಸಾಬೀತಾಗಿರುವುದರಿಂದ ಉಡುಪಿಯ ಆದಿತ್ಯರಾವ್‌ಗೆ 20 ವರುಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ 4ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಬಿ. ಆರ್. ಪಲ್ಲವಿ ಶಿಕ್ಷೆ ಪ್ರಕಟಿಸಿದರು. ದಂಡ ಕಟ್ಟಲಾಗದಿದ್ದಲ್ಲಿ ಅದಕ್ಕೆ ಒಂದು ವರುಷದ ಸಾದಾ‌ ರಜೆಯನ್ನೂ ನೀಡಲಾಗಿದೆ.

2020ರ ಜನವರಿ 20ರಂದು ಆದಿತ್ಯರಾವ್ ಆಟೋದಲ್ಲಿ ಬಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಚೀಲ ಇಟ್ಟು ಪರಾರಿಯಾಗಿದ್ದ.