ಕಟ್ಟಡ ಕಾರ್ಮಿಕರ ಮಂಗಳೂರು ನಗರ ಸಮಾವೇಶವನ್ನು CITU ರಾಜ್ಯ ಉಪಾಧ್ಯಕ್ಷರಾದ ಕಾಂ.ವಸಂತ ಆಚಾರಿಯವರು ಉದ್ಘಾಟಿಸಿದರೆ,CITU ಜಿಲ್ಲಾ ಮುಖಂಡರಾದ ಯೋಗೀಶ್ ಜಪ್ಪಿನಮೊಗರುರವರು ಮಾರ್ಗದರ್ಶನ ನೀಡಿದರು. ಕೊನೆಯಲ್ಲಿ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಸಮಾರೋಪ ಭಾಷಣ ಮಾಡಿದರು.ಪ್ರಾರಂಭದಲ್ಲಿ CWFI ಮಂಗಳೂರು ನಗರ ಅಧ್ಯಕ್ಷರಾದ ರವಿಚಂದ್ರ ಕೊಂಚಾಡಿಯವರು ಧ್ವಜಾರೋಹಣ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.