ರಾಜೀನಾಮೆ ನೀಡಿದ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಜಾಗಕ್ಕೆ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಆರಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷವು ಪಂಜಾಬಿಗೆ ಸಿಖ್ ದಲಿತ ಮುಖ್ಯಮಂತ್ರಿಯನ್ನು ನೀಡಿದೆ.

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಕೂಡಲೆ ಚರಣ್ ಜಿತ್ ಸಿಂಗ್ ಚನ್ನಿ ಅವರು ರಾಜ್ಯಪಾಲ ಬನ್ವರಿಲಾಲ್ ಪುರೋಹಿತರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡಿಸಿದರು.

ಸೋಮವಾರ ಹೊಸ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವರು + ಸ್ವೀಕರಿಸಿದರು. ಆಯ್ಕೆಗೆ ಮುಂದಿದ್ದ ಎಲ್ಲರನ್ನೂ ಹಿಂದೊತ್ತಿದ ಕಾಂಗ್ರೆಸ್ ವೀಕ್ಷಕರು ಅಚ್ಚರಿಯ ಚನ್ನಿ ಹೆಸರನ್ನು ಮುಂದಿಟ್ಟರು.

ಮಾಜೀ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಇದು ಸೂಕ್ತ ಆಯ್ಕೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಾಯಕತ್ವವನ್ನು ಚನ್ನಿ ನೀಡುವರು ಎಂದು ಹೇಳಿದರು.