ಮಂಗಳವಾರದ 24 ಗಂಟೆಗಳಲ್ಲಿ ಲೋಕದಲ್ಲಿ 5.9 ಲಕ್ಷದಷ್ಟು ಹೊಸ ಸೋಂಕಿತರು ಪಾಸಿಟಿವ್ ಪಡೆದರು. ಅದೇ ಅವಧಿಯಲ್ಲಿ ಕೊರೋನಾ ಮರಣವು ನಿನ್ನೆ 10.8 ಸಾವಿರದಷ್ಟು ಇತ್ತು. ನಿನ್ನೆಯದ್ದು ಸೇರಿ ಜಗತ್ತಿನಲ್ಲಿ ಸೋಂಕಿತರ ಸಂಖ್ಯೆಯು 19,59,30,992ಕ್ಕೆ ಏರಿದೆ. ಅದೇ ಅವಧಿಯಲ್ಲಿ ನಿನ್ನೆಯದ್ದು ಸೇರಿ ಒಟ್ಟು ಕೋವಿಡ್ ಮರಣ ಹೊಂದಿದವರ ಸಂಖ್ಯೆ 41,92,184 ದಾಟಿ ಸಾಗಿದೆ.
ನಿನ್ನೆ ದಿನ 24 ಗಂಟೆಗಳಲ್ಲಿ ಭಾರತದಲ್ಲಿ ನೋವೆಲ್ ಕೋವಿಡ್ 19 ಹತೋಟಿಗೆ ಬಂದ ಲಕ್ಷಣ ಬಿದ್ದು ಹೋಗಿದೆ. ಕೇರಳದಲ್ಲಿ ಮಂಗಳವಾರ 22,129 ಜನ ಪಾಸಿಟಿವ್ ಎನಿಸಿದರು. ಕಳೆದೊಂದು ತಿಂಗಳಲ್ಲಿ ಬೇರಾವುದೇ ರಾಜ್ಯವನ್ನು ಮೀರಿಸಿದ ಸೋಂಕು ಮಟ್ಟವಿದು. ನಿನ್ನೆ ದಿನ ನಮ್ಮ ಜನ ಭಾರತ ದೇಶದಲ್ಲಿ 81,858 ಮಂದಿ ಪಾಸಿಟಿವ್ ಸಾಂಕ್ರಾಮಿಕ ಎನಿಸಿದರು. ಸೋಂಕಿತರ ಮೊತ್ತವು ಅಲ್ಲಿಗೆ 3,14,83,411ಕ್ಕೆ ಏರಿದೆ. ಮಂಗಳವಾರ ದಿನ ದೇಶದಲ್ಲಿ 1,187 ನಮ್ಮ ಜನ ಕೊರೋನಾ ಸಾವು ಹೊಂದಿದರು. ದೇಶದಲ್ಲಿ ಈಗ ಕೋವಿಡ್ಗೆ ಬಲಿಯಾದವರ ಸಂಖ್ಯೆಯು 4,22,054 ದಾಟಿ ಸಾಗಿದೆ.
ಕೋವಿಡ್ ತಾನಿರುವುದನ್ನು ರಾಜ್ಯದಲ್ಲಿ ಇನ್ನೂ ಮುಚ್ಚಿಟ್ಟಿಲ್ಲ. ಮಂಗಳವಾರ ಪಾಸಿಟಿವ್ ಎನಿಸಿದವರ ಸಂಖ್ಯೆ 1,501. ಅಲ್ಲಿಗೆ ಒಟ್ಟು ಸೋಂಕಿತರೆನಿಸಿದವರ ಸಂಖ್ಯೆಯು 28,97,664 ದಾಟಿತು. ನಿನ್ನೆ ಕೋವಿಡ್ ಕೋವಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 32. ಹಾಗಾಗಿ ರಾಜ್ಯದಲ್ಲಿ ಕೊರೋನಾಕ್ಕೆ ಬಲಿಯಾದವರ ಒಟ್ಟು ಸಂಖ್ಯೆಯು 36,437 ದಾಟಿದೆ.
ಮಂಗಳವಾರದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನ ಮೃತ್ಯುವಿಗೆ ಸೇರಲಿಲ್ಲ ಎಂಬುದು ವಿಶೇಷ. ಒಟ್ಟು ಸಾವಿನ ಮೊತ್ತವು 1,397ರಲ್ಲೇ ಇದೆ. ನಿನ್ನೆಯ ದಿನದಲ್ಲಿ 247 ಜನ ಹೊಸದಾಗಿ ಸೋಂಕು ಭಾಜನರಾದರು. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರಾದವರ ಒಟ್ಟು ಸಂಖ್ಯೆ 98,927 ದಾಟಿ ಸಾಗಿತು.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ಕೊರೋನಾದಿಂದ ಕುಂದಾಪುರದ 78ರ ಹಿರಿಯ ಮಹಿಳೆ ಒಬ್ಬರು ಮರಣ ಹೊಂದಿದರು. ಜಿಲ್ಲೆಯಲ್ಲಿ ಕೋವಿಡ್ ಬಲಿ ಪಡೆದವರ ಸಂಖ್ಯೆಯು 411 ಆಯಿತು. ಮಂಗಳವಾರ ಪಾಸಿಟಿವ್ ಸಾಂಕ್ರಾಮಿಕ ಎನಿಸಿದವರ ಸಂಖ್ಯೆ 98. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರಾದವರ ಸಂಖ್ಯೆಯು 69,189ಕ್ಕೆ ಏರಿತು.