ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವಿಮೆನ್ ಎಂಪವರ್ಮೆಂಟ್ ಸೆಲ್ ಮತ್ತು  ಆ್ಯಂಟಿ ವಿಮೆನ್ ಹಾರ್ರಸಮೆಂಟ್ ಸೆಲ್ ಇದರ ಜಂಟಿ ಆಶ್ರಯದಲ್ಲಿ ‘ಎಂಪವರ್ ವಿಮೆನ್, ಟ್ರಾನ್ಸಾಫಾರ್ಮ್ ಲೈವ್ಸ್’ ಕಾರ್ಯಕ್ರಮವನ್ನು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ವಿಧಾನಸಭಾ  ಕ್ಷೇತ್ರದ ಮಾಜಿ  ಶಾಸಕರಾದ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಮಾತನಾಡಿ,‘ಮಹಿಳೆಯರು ತಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಲು ಛಲವನ್ನು ಹೊಂದಿಕೊಂಡಿರಬೇಕು. ಸಮಾಜದಲ್ಲಿ ಮಹಿಳೆಯರು ಎದ್ದು  ನಿಲ್ಲಬೇಕು, ವೀರ ರಾಣಿ ಒನಕೆ ಓಬವ್ವ ನಂತೆ ಶತ್ರುಗಳ ಜೊತೆ ಹೋರಾಡಬೇಕು. ಯಾರಿಗೂ ಹೆದರದೆ ತಮ್ಮ ವಿಚಾರಗಳನ್ನು ಮುಂದಿಡಬೇಕು. ಸೋಮಾರಿತನವನ್ನು  ಬಿಟ್ಟು ಜೀವನದಲ್ಲಿ ಮುನ್ನುಗಬೇಕು. ನಿಮ್ಮ ಕಲಿಯುವಿಕೆಯನ್ನು ಚೆನ್ನಾಗಿ  ಮುಂದುವರಿಸಿ ಎಂದು  ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ ಕಾಲೇಜಿನ  ಪ್ರಾಂಶುಪಾಲರಾದ ವಂ ಫಾ ಡಾ ಆ್ಯಂಟನಿ  ಪ್ರಕಾಶ್ ಮೊಂತೆರೊ ವಿದ್ಯಾರ್ಥಿನಿಯರನ್ನು  ಉದ್ದೇಶಿಸಿ ಮಾತನಾಡಿ, ನಿಮ್ಮ ಶಕ್ತಿಯನ್ನು ನಿಮ್ಮ ಮಾತು ಮತ್ತು ಕಾರ್ಯಗಳಲ್ಲಿ ಪ್ರದರ್ಶಿಸಿ,ನಿಮ್ಮ ಜೀವನಕ್ಕಾಗಿ ನೀವೇ ಗಳಿಸಿ. ಮಹಿಳೆಯರು ಶ್ರಮಜೀವಿಗಳಾಗಿರಬೇಕು, ಕೆಲಸ ಮತ್ತು ಸ್ವಚ್ಛತೆಯ ಬಗ್ಗೆ ಬದ್ಧತೆಯನ್ನು ಹೊಂದಿರಬೇಕು. ಸಮಾಜದಲ್ಲಿ ಮಹಿಳೆಯರಿಗೆ ಅನೇಕ ಅವಕಾಶಗಳಿವೆ, ನಿಮ್ಮಲ್ಲಿರುವ ಶಕ್ತಿ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಿ ಎಂದು  ಹೇಳಿದರು. 

ವಿಮೆನ್ ಎಂಪವರ್ಮೆಂಟ್ ಸೆಲ್ ಸಂಯೋಜಕರಾದ ಪ್ರೇಮಲತಾ  ಕೆ ಮತ್ತು ಆ್ಯಂಟಿ ವಿಮೆನ್ ಹಾರ್ರಸಮೆಂಟ್ ಸೆಲ್ ಸಂಯೋಜಕರಾದ ನೋವ್ಲಿನ್ ಎನ್  ಡಿ  ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಪಿ ಆರ್ ಒ  ಭಾರತಿ  ಎಸ್  ರೈ ,ಕಾಲೇಜಿನ ಮಹಿಳಾ  ಉಪನ್ಯಾಸಕಿಯರು ಮತ್ತು ಮಹಿಳಾ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವು ತ್ರಿತೀಯ ಬಿಎಸ್ಸಿ ವಿದ್ಯಾರ್ಥಿನಿಯರಾದ ಅಖಿಲ ಮತ್ತು ನವ್ಯ  ಇವರಿಂದ ಪ್ರಾರ್ಥನೆಯೊಂದಿಗೆ ಆರಂಭವಾಯಿತು.ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಲಾನಿಷಾ ಡಿ ಸೋಜಾ ಸ್ವಾಗತಿಸಿ, ರಿಯಾ ವಂದಿಸಿದರು. ವಿದ್ಯಾರ್ಥಿನಿ  ಅಪೂರ್ವ ಡಿ  ಕಾರ್ಯಕ್ರಮವನ್ನು  ನಿರೂಪಿಸಿದರು.