ತುಮಕೂರು, ಡಿಸೆಂಬರ್ 30: ಕಳೆದ 45 ವರ್ಷಗಳಿಂದ ದೇಶದ ಯುವ ಸಮೂಹದಲ್ಲಿ ಭಾರತೀಯ ಪ್ರಾಚೀನ ಸಂಸ್ಕೃತಿ ಮತ್ತು ಏಕಾಗ್ರತೆ ಕಲೆಗಳ ಬಗ್ಗೆ ಅರಿವು ಹೆಚ್ಚಿಸಿ ಬೆಳೆಸುವ ನಿಟ್ಟಿನಲ್ಲಿ ಹಲವಾರು ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸೇವೆ ಸಲ್ಲಿಸಲಾಗುತ್ತಿದೆ ಎಂದು ಐಐಟಿಯ ಮಾಜಿ ಪ್ರಾಧ್ಯಾಪಕ ಮತ್ತು ಸೊಸೈಟಿ ಫಾರ್ ದಿ ಪ್ರಮೋಷನ್ ಆಫ್ ಇಂಡಿಯನ್ ಶಾಸ್ತ್ರೀಯ ಸಂಗೀತದ ಸಂಸ್ಥಾಪಕ ಪದ್ಮಶ್ರೀ ಪುರಸ್ಕ್ರತ ಡಾ ಕಿರಣ್ ಸೇಠ್ ಹೇಳಿದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅವರ 145 ದಿನಗಳ ಸೈಕ್ಲಿಂಗ್ ಕಾರ್ಯಾಚರಣೆಯಲ್ಲಿ ಅವರು ಇಂದು ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಎಂಪ್ರೆಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಕಲೆಗಳನ್ನು ಅಭ್ಯಸಿಸುದವರ ಮೂಲಕ ವಿಧ್ಯಾರ್ಥಿಗಳು ತಮ್ಮ ಏಕಾಗ್ರತೆಯನ್ನು ವೃದ್ದಿಸಬಹುದು, ಸ್ವಯಂ ಸೇವಕರಿಂದ ನಡೆಯುವ SPI ಅ ಒಂಅಂಙ ಸಂಸ್ಥೆಯು ರಾಷ್ಟ್ರದ ಹಿತಕ್ಕಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದು, ಅಮೂಲಕ ದೇಶ ವಿದೇಶಗಳಲ್ಲಿ ಲಕ್ಷಾಂತರ ಯುವಕರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿದೆ ಎಂದರು.
ವಿದ್ಯಾರ್ಥಿಗಳೊಂದಿಗಿನ ಸಂವಾದ: ಈ ಸಂದರ್ಭದಲ್ಲಿ, ಡಾ ಸೇಠ್, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೌಶಲ್ಯವನ್ನು ರೂಢಿಸಿಕೊಳ್ಳವ ರೀತಿಯ ಬಗ್ಗೆ ತಿಳಿಸಿಕೊಟ್ಟರು, ಪಾಶ್ಚಿಮಾತ್ಯ ಮತ್ತು ಭಾರತೀಯ ಪರಿಕಲ್ಪನೆಯಲ್ಲಿ ಯೋಗವು ಆರೋಗ್ಯಕರ ಬೆಳವಣಿಗೆಗೆ ಮುಖ್ಯವಾಗಿದೆ ಎಂದು ಒತ್ತಿ ಹೇಳಿದರು, ಪ್ರಸ್ತುತ ಜಗತ್ತಿಗೆ ಭಾರತೀಯ ಶಾಸ್ತ್ರೀಯ ಸಂಗೀತದ ಪ್ರಸ್ತುತತೆಯ ಅವಶ್ಯಕತೆ ಹೆಚ್ಚಿದೆ, ಶಾಸ್ತ್ರೀಯ ಸಂಗೀತವು ಮನಸ್ಸನ್ನು ಪ್ರಶಾಂತವಾಗಿಸಿಸುತ್ತದೆ, ಧ್ಯಾನ ಮತ್ತು ಯೋಗದಿಂದ ಆರೋಗ್ಯ ಹಾಗೂ ಏಕಾಗ್ರತೆಯು ಹೆಚ್ಚುತ್ತದೆ ಇದು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕವಾಗಿದೆ ಎಂದರು ಹಾಗೂ ಜೀವನದಲ್ಲಿ ಸೈಕಲ್ ಸವಾರಿಯ ಮಹತ್ವವನ್ನು ವಿವರಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಡಾ.ಕಿರಣ್ ಸೇಠ್ ಅವರು ತಮ್ಮ 73ನೇ ಇಳಿಯ ವಯಸ್ಸಿನಲ್ಲಿ ಸೈಕಲ್ ಜಾಥಾ ಮೂಲಕ 2022ರ ಆಗಸ್ಟ್ 15 ರಂದು ಕಾಶ್ಮಿರದಿಂದ ಹೊರಟ ಅವರು ಭಾರತದ ಸಂಸ್ಕೃತಿ ಮತ್ತು ಕಲಾಚಾರದ ಮಹತ್ವವನ್ನು ದೇಶದ ಮೂಲೆ ಮೂಲೆಗಳಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸಿ ಕನ್ಯಾಕುಮಾರಿಯಲ್ಲಿ ತಮ್ಮ ಯಾತ್ರೆಯನ್ನು ಪೂರ್ಣಗೊಳಿಸಲಿದ್ದಾರೆ, ಯೋಗ ಮತ್ತು ಭಾರತೀಯ ಸಂಗೀತವು ದೇಶದ ಶಕ್ತಿಯಾಗಿದೆ, ಇದನ್ನು ನಾವು ಪ್ರತಿನಿತ್ಯ ಅಭ್ಯಾಸ ಮಾಡಬೇಕು, ವ್ಯಕ್ತಿಯಲ್ಲಿರುವ ಖಿನ್ನತೆ, ಒತ್ತಡವನ್ನು ಇವು ದೂರ ಮಾಡಿ ಉತ್ತಮ ಮನೋಭಾವನೆ ತರುತ್ತವೆ, ಇದರಿಂದ ಸಮಾಜದಲ್ಲಿ ನಡೆಯುವ ಅಪರಾಧಗಳು ಕಡಿಮೆಯಾಗುತ್ತವೆ, ಉತ್ತಮ ಯೋಗಾಭ್ಯಾಸಿಯು ಖಂಡಿತ ಉತ್ತಮ ಭಾರತೀಯ ಪ್ರಜೆಯಾಗಿ ರೂಪಗೊಳ್ಳುತ್ತಾನೆ, ಯುವ ಸಮೂಹ ಯೋಗ ಮತ್ತು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವಂತೆ ಕರೆ ನೀಡಿದರು.
ಡಾ. ಕಿರಣ್ ಸೇಠ್ ರೊಂದಿಗೆ ಕೈ ಜೋಡಿಸಿ ಇಂತಹ ಮಹತ್ವವಾದ ಉದ್ದೇಶವನ್ನು ಹೊತ್ತಿರುವ SPI ಅ ಒಂಅಂಙ ಯಲ್ಲಿ ಭಾಗವಹಿಸಲು ಈ ಸೈಕಲ್ ಯಾತ್ರೆಯ ಅವಕಾಶ ಕಲ್ಪಿಸಿದೆ, ಇಲ್ಲಿಯವರೆಗೂ 3500 ಕೀ.ಮಿ ಯಾತ್ರೆ ಮಾಡಿದ್ದು, ದೊಡ್ಡಬಳ್ಳಾಪುರ ಮೂಲಕ ಡಿಸೇಂಬರ್ 29 ರಂದು ತುಮಕೂರು ಜಿಲ್ಲೆ ಪ್ರವೇಶಿಸಿದ ಕಿರಣ್ ಸೇಠ್ ಅವರು ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರವೇಶಿಸಲಿದ್ದಾರೆ, ದೇಶದ ಬುನಾದಿಯಾದ ಶಿಕ್ಷಣ ತಜ್ಞರನ್ನು ಶಿಕ್ಷಕವೃಂದ ಮತ್ತು ಯುವ ಪೀಳಿಗೆಯನ್ನು ಉತ್ತೇಜಿಸಲಿದ್ದಾರೆ. SPI ಅ ಒಂಅಂಙ ಯೊಂದಿಗೆ ಸಹವರ್ತಿಸಲು ಮತ್ತು ಜೊತೆಗೂಡಲು ಕರ್ನಾಟಕದ ಸ್ವಯಂ ಸೇವಕರನ್ನು ಸಂಪರ್ಕಿಸಿ: 9483537697, 9141219269, 6362093267.
ಈ ಸಂದರ್ಭದಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜನಾಧಿಕಾರಿ ನವೀನ್ ಕುಮಾರ್, ಎಂಪ್ರೆಸ್ ಕಾಲೇಜ್ ಪ್ರಾಚಾರ್ಯ ಷಣ್ಮುಖ ಎಸ್, ಉಪ ಪ್ರಾಚಾರ್ಯ ಶಿವಾಜಿರಾವ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.