ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಅಗಸೂರು ಗ್ರಾಮದಲ್ಲಿ ಮನೆಗೆ ರಾತ್ರಿ ಬಡಿದ ಸಿಡಿಲು ಮನೆಗೆ ಹಾನಿ ಮಾಡಿ ಮಹಿಳೆಯನ್ನು ಬಾಧಿಸಿದೆ. ಮಹಿಳೆಯ ಪಕ್ಕ ಮಲಗಿದ್ದ ಮಗು ಅಪಾಯದಿಂದ ಪಾರಾಗಿದೆ.
ಅಂಕೋಲ ತಾಲೂಕು ಆಸ್ಪತ್ರೆಯಲ್ಲಿ ಬಾಧಿತ ಮಹಿಳೆ ರಂಜಿತಾ ಜಗದೀಶ ಗೌಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ವಿದ್ಯುತ್ ಸಂಪರ್ಕ ಮತ್ತು ಉಪಕರಣಗಳು ಸಿಡಿಲು ಬಡಿತಕ್ಕೆ ಕೆಟ್ಟಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ.