ಮಂಗಳೂರು : ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ವತಿಯಿಂದ "ಆಧುನಿಕ ದಿನದ ಬಂಡವಾಳ ಹೂಡಿಕೆ   " ಈ ವಿಷಯದ  ಬಗ್ಗೆ ಒಂದು ದಿನದ   ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್  ನಲ್ಲಿ ಜೂಲೈ 26 ರಂದು ಸಾಯಂಕಾಲ  ನಡೆಸಲಾಯಿತು. ಇದನ್ನು ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ   ಡಾ . ಪದ್ಮರಾಜ್ ಹೆಗ್ಡೆ ಯವರು ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಕಿರಣ್ ಕುಮಾರ್ ,  ಎಂ ಬಿ ಏ , ಸರ್ಟಿಫೈಡ್ ಫೈನಾನ್ಸಿಯಲ್ ಅಡ್ವೈಸರ್  , ಇವರು  ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಆದಾಯದ ಸರಿಯಾದ ಹೂಡಿಕೆ ಹಾಗು ಅದರ ಸರಿಯಾದ ಬಳಕೆ ಈ ವಿಷಯದ ಬಗ್ಗೆ  ಅವರು ಈ ಸಂದರ್ಭದಲ್ಲಿ ವಿವರಿಸಿದರು.  ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಡಾ. ಭರತ್ ಪ್ರಭು  ಹಾಗು ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ರವರು ಉಪಸ್ಥಿತರಿದ್ದರು. ಡಾ. ರಚನಾ ಶೆನೊಯ್  ಅವರು  ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.