ಮಂಗಳೂರು:  ಲೇಖಕಿ ಡಾ ಅರುಣಾ ನಾಗರಾಜ್ ರವರ ಅರಿಷಡ್ವೈರಿಗಳ ಗೊಂದಲಾಪುರದಾಚೆ ಎಂಬ  ಚಿಂತನ ಸಂಕಲನವು ಇತ್ತೀಚೆಗೆ ಮಂಗಳೂರಿನ ದೀಪಾಕಂಫರ್ಟ್ಸ್ ಸಭಾಂಗಣದಲ್ಲಿ ನಡೆಯಿತು.

ಕೃತಿ ಬಿಡುಗಡೆ ಮಾಡಿ ಬೆಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ ಪ್ರಮಿಳಾ ಮಾಧವ್ ರವರು ಅರಿಷಡ್ವೈರಿಗಳ ಗೊಂದಲಾಪುರದಾಚೆ ಯಂತಹ ಕೃತಿಗಳು ಮತ್ತಷ್ಟು ಬೆಳಕಿಗೆ ಬರಬೇಕು ಅಂತೆಯೇ ಡಾ ಅರುಣಾರವರಂತಹ  ಚಿಂತಕಿಯರು ಇನ್ನಷ್ಟು ಬೆಳೆಯಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ಪಂಚಮಹಾಶಕ್ತಿ ಶ್ರೀ ಗಾಯತ್ರಿ ದೇವಿ ಸಿಧ್ದಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ರಾದ ಶ್ರೀ ರಮೇಶ್ ಕೃಷ್ಣ ಶೇಟ್ ರವರು ದೀಪ ಬೆಳಗಿಸಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಂ ಆರ್  ಪಿ ಎಲ್ ನ ನಿವೃತ್ತ  ಮಹಾಪ್ರಬಂಧಕರಾದ  ವೀಣಾ ಟಿ ಶೆಟ್ಟಿಯವರು ಕೃತಿ ಯ ಶೀರ್ಷಿಕೆಯೇ ಅದರ ಅಂತರಾಳದ  ಮಹತ್ವವನ್ನು ತಿಳಿಸುತ್ತದೆ ಎಂದರು.

ಪತ್ರಕರ್ತೆ ಡಾ ಮಾಲತಿ ಶೆಟ್ಟಿ ಮಾಣೂರುರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಕೆ  ಎಮ್ ಸಿ ಯ ಖ್ಯಾತ ವೈದ್ಯೆ ಡಾ ಪ್ರಿಯಾಂಕಾ ಅರುಣ್ ಶಿರಾಲಿಯವರು ಪ್ರಚಲಿತ ಸಮಾಜಕ್ಕೆ ಇಂತಹಾ ಕೃತಿಗಳ ಅವಶ್ಯಕತೆಯನ್ನು  ತಿಳಿಸಿದರು.  ವಕೀಲರಾದ ಪುಷ್ಪಲತಾ ಯು ಕೆ ಇವರು ಡಾ ಅರುಣಾ ನಾಗರಾಜ್ ರವರ  ಬಹುಮುಖ ಪ್ರತಿಭೆಯನ್ನು ಕೊಂಡಾಡಿದರು.

ದೈವಜ್ಞ ಸೌರಭ ಮಾಸ ಪತ್ರಿಕೆಯ  ಪ್ರಶಾಂತ್ ಶೇಟ್. ರವರು ಸಮಾಜ ಇಂತಹಾ ಕೃತಿಗಳನ್ನು ಪ್ರೋತ್ಸಾಹಿಸಬೇಕೆಂದರು.  ಸಿ ಎ ಕಿರಣ್ ಶೇಟ್ ರವರು ಲೇಖಕಿಯಿಂದ  ಇಂತಹಾ ಮತ್ತಷ್ಟು ಕೃತಿಗಳು  ಹೊರಬರಲಿ ಎಂದು  ಶುಭಕೋರಿದರು.

ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯ ನಿವೃತ್ತ ಅಧೀಕ್ಷಕ ರಾದ  ನಾಗರಾಜ್ ಶೇಟ್,   ಮಂಜುನಾಥ್ ಶೇಟ್ ಎಂ ಟೆಕ್  ಇವರು ಸಹಕರಿಸಿದರು. ಸಿಂಧೂ ಮಂಜುನಾಥ್ ಬಿ ಇ ಇವರು ವಂದಿಸಿದರು.  ಅನಂತದ ಲೇಖಕಿಯ ಮೊಮ್ಮಗ  ಜನಿತ್ ಎಂ ಶೇಟ್ ಇವರ ಐದನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.