ಜನರ ಬದುಕು ಸುಗಮವಾಗಿಸುವುದು ಸರಕಾರದ ಜವಾಬ್ದಾರಿ. ಗೃಹ ಸಚಿವರು ಪೋಲೀಸರಿಗೆ ಬೈದರೆ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ಮಾಜೀ ಮಂತ್ರಿ ಯು. ಟಿ. ಖಾದರ್ ಹೇಳಿದರು.

ಎಲ್ಲ ಧರ್ಮದವರು ಸಕಾರಾತ್ಮಕವಾಗಿ ಸಮಾಜದ ಸುಗಮತೆಗೆ ಒತ್ತು ನೀಡಬೇಕು.

ಇನ್ನು ಭಾವನಾತ್ಮಕ ವಿಷಯ ಕೆದಕಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. 

ಇಲ್ಲಿ ರಾಜಕೀಯ ಬದಿಗಿಟ್ಟು ಸಮಾಜದಲ್ಲಿ ಮತ್ತೆ ಮತ್ತೆ ಗಲಾಟೆಗೆ ಅವಕಾಶವಾಗದಂತೆ ಪೋಲೀಸರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇದು ಸರಕಾರದ ಜವಾಬ್ದಾರಿ. ಅದು ಜಾರಿಕೊಳ್ಳುವಂತಿಲ್ಲ ಎಂದು ಖಾದರ್ ಹೇಳಿದರು.