ಉಡುಪಿ ಜಿಲ್ಲೆಯ ತೊಟ್ಟಂನಲ್ಲಿ ಕಂಟೈನರ್ ಲಾರಿಯಿಂದ ಗ್ರಾನೈಟ್ ಇಳಿಸುವಾಗ ಅದು ಉರುಳಿ ಒಡಿಶಾ ಮೂಲದ ಇಬ್ಬರು ಕಾರ್ಮಿಕರು ಸ್ಥಳದಲ್ಲಿಯೇ ಮರಣ ಹೊಂದಿದರು.

38ರ ಬಾಬುಲ್ಲ, 40ರ ಭಾಸ್ಕರ ಸಾವಿಗೀಡಾದವರು. ಮಲ್ಪೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಈಶ್ವರ ಮಲ್ಪೆ ತಂಡ ಗ್ರಾನೈಟ್ ಅಡಿಯಿಂದ ಶವಗಳನ್ನು ಹೊರ ತೆಗೆಯಿತು.