ಜನರಿಗೆ ವಂಚಿಸಿ, ಉದ್ಯಮಿಗಳನ್ನು ವಹಿಸಿ ಜನದ್ರೋಹಿ ಆಡಳಿತ ನಡೆಸುತ್ತಿರುವ ನೀವು ಯಾವ ಮುಖ ಇಟ್ಟುಕೊಂಡು ಜನಾಶೀರ್ವಾದ ಕೇಳಲು ಸುತ್ತು ಬರುತ್ತಿದ್ದೀರಿ ಹೀಗೆಂದು ಮಾಜೀ ಮಂತ್ರಿ ಯು. ಟಿ. ಖಾದರ್ ಕೇಳಿದರು.

ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣಾ ಉಸ್ತುವಾರಿ ಹೊತ್ತಿರುವ ಅವರು ಅಲ್ಲಿ ಪ್ರಚಾರದ ವೇಳೆ ಈ ಪ್ರಶ್ನೆ ಮುಂದಿಟ್ಟರು. ಬೆಲೆಯೇರಿಕೆ, ಸುಳ್ಳು ಆಶ್ವಾಸನೆ, ರಾಜ್ಯಗಳಿಗೂ ಮೋಸ ಮಾಡಿದ ಬಿಜೆಪಿ ಸರಕಾರದ ಜನರಿಗೆ ಜನಾಶೀರ್ವಾದ ಕೇಳುವ ಹಕ್ಕು ಇಲ್ಲ. ಕೊರೋನಾ ನಿರ್ವಹಣೆಯನ್ನೂ ಲಾಭಕ್ಕೆ ಬಳಸಿಕೊಂಡ ಸರಕಾರ ಈ ಬಿಜೆಪಿಯದು ಎಂದು ಖಾದರ್ ಟೀಕಿಸಿದರು.