ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇತ್ತೀಚೆಗೆ ತಂಬಾಕು ವಿರೋಧಿ ದಿನಾಚರಣೆ ನಡೆಯಿತು ಮುಖ್ಯಶಿಕ್ಷಕಿ ಜಯಲಕ್ಷ್ಮಿ ತಂಬಾಕು ಸೇವಿಸುವವರ ಜೊತೆಯಲ್ಲಿ ಅವರ ಸಮೀಪವರ್ತಿಗಳೂ ಕೂಡ ಆರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಾರೆ. ಆದುದರಿಂದ ನಾವೆಲ್ಲರೂ ತಂಬಾಕು ಸೇವನೆಯ ವಿರುದ್ದ ಎಚ್ಚರಿಕೆಯನ್ನು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ವಿದ್ಯಾರ್ಥಿನಿ ನಂದಿನಿ ವಿಷಯದ ಕುರಿತಾಗಿ ಮಾತನಾಡಿದಳು. ಶಿಕ್ಷಕಿ ಶ್ರೀಮತಿ ಜ್ಯೋತಿ ಪ್ರತಿಜ್ಞಾವಿಧಿ ಬೋಧಿಸಿದರು. ಸಭಾ ಕಾರ್ಯಕ್ರಮದ ನಂತರ ಬೀದಿ ಜಾಥಾ ನಡೆಯಿತು.