ಮಂಗಳೂರು, ಜೂನ್ 14: ಬುಡಕಟ್ಟು ಅತಿ ಹಿಂದುಳಿದ ಕೊರಗ ಜನಾಂಗದವರ ಆಸ್ಪತ್ರೆ ಶುಲ್ಕ ಪಾವತಿಯನ್ನು ರದ್ದು ಪಡಿಸಿರುವುದನ್ನು ಪ್ರತಿಭಟಿಸಿ ಸುಂದರ ಅವರ ನಾಯಕತ್ವದಲ್ಲಿ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ಡಾ. ಬಿ. ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಗೋಕುಲ್‌ದಾಸ್, ಕುದ್ಮುಲ್‌‌ರ ಫೋಟೋಗಳಿಗೆ ಹೂ ಮಾಲಾರ್ಪಣೆ ಬಳಿಕ ಮೆರವಣಿಗೆ ಆರಂಭವಾಯಿತು.

ಮನವಿ ಸಲ್ಲಿಸುವುದರೊಂದಿಗೆ ಘೋಷಣೆ ಇಲ್ಲದ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಕೊನೆಗೊಂಡಿತು.

ವೆನ್ ಲಾಕ್ ಆಸ್ಪತ್ರೆ ಪ್ರಮುಖರಿಗೆ ಮನವಿಯ ಪ್ರತಿಯನ್ನು ಸಲ್ಲಿಸಲಾಯಿತು.

ಶಶಿಕಲಾ ಕೋಡಿಕಲ್, ರಮೇಶ್ ಎದು್ಪದವು, ಕೊಗ್ಗ ಕೋಡಿಕಲ್, ಗೌರಿ ಕೆಂಜೂರು, .ಬಾಬು ಪಾಂಗಾಳ, ಚಂದ್ರಾವತಿ ಉಜಿರೆ, ಕಿರಣ್ ಗುಂಡಾವು ಇವರೆಲ್ಲರ ನಾಯಕತ್ವದಲ್ಲಿ ಮೆರವಣಿಗೆ ಯಶಸ್ವಿಯಾಯಿತು.