ಮಂಗಳೂರು: ಖ್ಯಾತ ಕೊಂಕಣಿ ಸಾಹಿತಿ ಸಿಜ್ಯೆಸ್ ತಾಕೊಡೆ ಎಂದು ಪ್ರಸಿದ್ದರಾಗಿದ್ದ ಸಿರಿಲ್ ಜಿ ಸಿಕ್ವೇರಾ ಅವರ ಶ್ರದ್ಧಾಂಜಲಿ ಸಭೆ ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ಭಾನುವಾರ (12.06.2022) ನಡೆಯಿತು.

ಕೊಂಕಣಿ ಕವಿ ಟೈಟಸ್ ನೊರೊನ್ಹಾ, ರಾಕ್ಣೊ ಸಹ ಸಂಪಾದಕ ಫಾದರ್ ರೂಪೇಶ್ ಮಾಡ್ತ ಹಾಗೂ ಕೊಂಕಣಿ ಲೇಖಕರ ಸಂಘ ಇದರ ಉಪಾಧ್ಯಕ್ಷ ಡಾ| ಎಡ್ವರ್ಡ್ ನಜ್ರೆತ್, ಇವರು ಸಿಜ್ಯೆಸ್ ತಾಕೊಡೆಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿ ಶ್ರದ್ಧಾಂಜಲಿಯ ಮಾತುಗಳನ್ನಾಡಿದರು. 

ಕೊಂಕಣಿ ಲೇಖಕರ ಸಂಘದ ಸಂಚಾಲಕ ರಿಚರ್ಡ್ ಮೊರಾಸ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕೊಂಕಣಿಯ ಅನೇಕ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂಘಟನೆಗಳ ಹಾಗೂ ನಿಯಕಾಲಿಕಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಬಿಷಪ್ ಫಾದರ್ ಹೆನ್ರಿ ಡಿಸೋಜ, ಕೊಂಕಣಿ ಸಾಹಿತಿಗಳು, ಸಂಗೀತಗಾರರು, ಕವಿಗಳು ಮತ್ತು ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕೊಂಕಣಿ ಕವಿ ಲೋಯ್ಡ್ ರೇಗೊ ಕಾರ್ಯಕ್ರಮವನ್ನು ನಿರೂಪಿಸಿದರು. ಕೊಂಕಣಿ ನಾಟಕ್ ಸಭಾದ ಉಪಾಧ್ಯಕ್ಷರಾದ ಲಿಸ್ಟನ್ ಡಿಸೋಜಾ ವಂದನಾರ್ಪಣೆ ಮಾಡಿದರು.