ದೆಹಲಿಯಿಂದ ಕೆಲವರು ಬಂದು 2,500 ಕೋಟಿ ರೂಪಾಯಿ ಹೊಂದಿಸಿಕೊಳ್ಳಿ, ನಿಮಗೆ ಮುಖ್ಯಮಂತ್ರಿ ಪಟ್ಟ ಸಿಗುತ್ತದೆ ಎಂದು ಹೇಳಿದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು.

ರಾಮದುರ್ಗದಲ್ಲಿ 2ಎ ಪಟ್ಟಿಗೆ ಪಂಚಮಸಾಲಿ ಸಮಾಜವನ್ನು ಸೇರಿಸಲು ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು. ನಾನು ವಾಜಪೇಯಿ ಜೊತೆಗೆ ಕೆಲಸ ಮಾಡಿದವನು. ನನಗೆ ಹೀಗೆ ಕೇಳುತ್ತಾರೆ. ಅಷ್ಟು ಹಣ ತರುವುದೆಲ್ಲಿ, ಇಡುವುದೆಲ್ಲಿ.ದಿಲ್ಲಿಯಲ್ಲಿ ಶಾ, ನಡ್ಡಾ ನಿಮಗೆ ಕಾದಿದ್ದಾರೆ ಎನ್ನುತ್ತಾರೆ. ಯಾಕೆ ಅವರಲ್ಲಿ ಫೋನ್ ಇಲ್ಲವೆ ಎಂದು ಯತ್ನಾಳ ಹೇಳಿದರು.

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ನಮ್ಮ ಜೊತೆಗೆ ಇದ್ದ ಸ್ವಾಮೀಜಿಯೊಬ್ಬರು 10 ಕೋಟಿ ರೂಪಾಯಿ ಪಡೆದುಕೊಂಡು, ಬಸವಾಯ ಎನ್ನುತ್ತ ದೂರವಾಗಿದ್ದಾರೆ ಎಂದು ಯತ್ನಾಳ ದೂರಿದರು.