ಪಕ್ಕಲಡ್ಕ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಜಮಾಅತ್ ಇಸ್ಲಾಮಿ ಹಿಂದ್ ಪಕ್ಕಲಡ್ಕ ವರ್ತುಲವು ಸಸಿ ನೆಡುವ ಕಾರ್ಯಕ್ರಮವನ್ನು ಪಕ್ಕಲಡ್ಕ ಪರಿಸರದಲ್ಲಿ ಹಮ್ಮಿಕೊಂಡಿತ್ತು ಈ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಮತ್ತು ಮಿಶ್ರಪದ್ಧತಿ ತಜ್ಞ ಪ್ರೊ| ಡಾಕ್ಟರ್ ಸುರೇಶ್ ನೆಗಳಗುಳಿ ಭಾಗವಹಿಸಿ ಪ್ರತಿಯೊಬ್ಬರೂ ಪರಿಸರದ ಮಹತ್ವ ಅರಿತು ಸ್ವಸ್ಥ ಪರಿಸರ ಉಳಿಸಿ ಬೆಳೆಸಲು ಪ್ರಯತ್ನ ಪಡಬೇಕು ಅದಕ್ಕಾಗಿ ಇಂದು ನೆಟ್ಟ ಗಿಡವನ್ನು ಸಂರಕ್ಷಿಸ ಬೇಕು ಹಾಗೂ ಪ್ರತಿದಿನವೂ ಪರಿಸರದ ದಿನ ಎಂದು ಭಾವಿಸಿ ಸದಾ ಕಾಲ ಗಿಡ ನೆಡ ಬೇಕು ಆಗ ಮಾತ್ರ ಹಸಿರು ಪರಿಸರದ ಶಾಶ್ವತೀ‌ಕರಣ ಸಾಧ್ಯ ಎನ್ನುತ್ತಾ ಸಾಲು‌ಮರದ ತಿಮ್ಮಕ್ಕನ ಉದಾಹರಣೆ ಸಹುತವಾಗಿ ವ್ಯಾಖ್ಯಾನಿಸಿದರು.

ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ ಅಧೀಕ್ಷಕರು ಮಾನಸ ಗಂಗೋತ್ರಿ, ಕೊಣಾಜೆ ಹರೀಶ್ ಕುಮಾರ್ ಕುಡ್ತಡ್ಕ ಮಾತಾಡಿ ಮನಸ್ಸು ಸ್ವಚ್ಚವಾಗಿದ್ದರೆ ಮಾತ್ರ ಪರಿಸರ ಸ್ವಚ್ಚತೆ ಆದ್ಯತೆ ಕೊಡಲು ಸಾದ್ಯ ಎನ್ನುವಂತಹ ಸಂದರ್ಭೋಚಿತ ಹಿತ ನುಡಿಯನ್ನು ನೀಡಿದರು. 

ಕಾರ್ಯಕ್ರಮದ ಸಂಚಾಲಕರಾದ ಅಬ್ದುಲ್ ಖಾದರ್ ಪಕ್ಕಲಡ್ಕ ಸ್ನೇಹ ಪಬ್ಲಿಕ್ ಸ್ಕೂಲ್ ಚೇರ್ಮನ್ ಯೂಸುಫ್ ಪಕ್ಕಲಡ್ಕ ಮತ್ತು ಜಮಾಅತ್ ಇಸ್ಲಾಮಿ ಹಿಂದ್ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ 80 ಕ್ಕಿಂತ ಹೆಚ್ಚು ಸಸಿಯನ್ನು ಈ ಸಂದರ್ಭದಲ್ಲಿ ನೆಡಲಾಯಿತು.