ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ವತಿಯಿಂದ "ಇಂಪ್ಲಾಂಟ್ ಪ್ರಾಕ್ಟೀಸ್ " ಈ ವಿಷಯದ ಬಗ್ಗೆ ಒಂದು ದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ನಗರದ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ಫೆಬ್ರವರಿ 23 ರಂದು ಸಾಯಂಕಾಲ ನಡೆಸಲಾಯಿತು. ಇದನ್ನು ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಅಧ್ಯಕ್ಷರಾದ ಡಾ . ಪದ್ಮರಾಜ್ ಹೆಗ್ಡೆ ಯವರು ಉದ್ಘಾಟಿಸಿದರು. ಮುಖ್ಯ ಸಂಪನ್ಮೂಲ ವ್ಯೆಕ್ತಿಯಾಗಿ ಡಾ. ರಕ್ಷಿತ್ ಹೆಗ್ಡೆ , ಪ್ರೊಫೆಸರ್ ನಿಟ್ಟೆ ಯೂನಿವರ್ಸಿಟಿ,ಇವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ದಂತ ವೈದ್ಯಕೀಯ ದಲ್ಲಿ ಇಂಪ್ಲಾಂಟ್ ನ ಅಳವಡಿಕೆ ಇದರ ಬಗ್ಗೆ ಮಾಹಿತಿ ಯನ್ನು ಅವರು ಈ ಸಂದರ್ಭದಲ್ಲಿ ವಿವರಿಸಿದರು. ಐ ಡಿ ಏ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಡಾ. ಭರತ್ ಪ್ರಭು ಹಾಗು ಖಜಾಂಚಿ ಡಾ.ಪ್ರಸನ್ನ ಕುಮಾರ್ ರಾವ್ ರವರು ಉಪಸ್ಥಿತರಿದ್ದರು. ಡಾ. ನಮನ ಉಡುಪರವರು ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ದಂತವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
