ಬೆಳ್ತಂಗಡಿ: ಶಿಕ್ಷಣ, ಸಮಾಜ ಸೇವೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ನೀಡುತ್ತಾ ಬಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿರುವುದಕ್ಕೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ವಿ. ರಾಮಸ್ವಾಮಿ, ರಾಜ್ಯಾಧ್ಯಕ್ಷರು, ಕೆ. ವಸಂತ ಸಾಲ್ಯಾನ್, ಸ್ಥಾಪಕಾಧ್ಯಕ್ಷರು, ಸತೀಶ್ ಹೊನ್ನವಳ್ಳಿ, ದೇವದಾಸ್ ಹೆಬ್ಬಾರ್, ನಿಕಟಪೂರ್ವ ರಾಜ್ಯಾಧ್ಯಕ್ಷರು, ಅನಿಲ್ ಕುಮಾರ್ ಎಸ್.ಎಸ್. ಮುಖ್ಯ ನಿರ್ವಹಣಾಧಿಕಾರಿಗಳು, ವಿವೇಕ್ ವಿ. ಪಾೈಸ್, ಪ್ರಾದೇಶಿಕ ನಿರ್ದೇಶಕರು, ಬೆಳ್ತಂಗಡಿ ತಾಲೂಕು ವೇದಿಕೆಯ ಅಧ್ಯಕ್ಷರಾದ ಶಾರದಆರ್. ರೈ., ಮಾಜಿ ಅಧ್ಯಕ್ಷರುಗಳಾದ ಕಿಶೋರ್ ಹೆಗ್ಡೆ, ಡಿ.ಎ. ರಹಿಮಾನ್, ಅಡೂರು ವೆಂಕಟ್ರಾಯ, ತಿಮ್ಮಪ್ಪಗೌಡ, ಪಿ.ಕೆ. ರಾಜು ಪೂಜಾರಿ, ಯೋಜನಾಧಿಕಾರಿಗಳಾದ ಜಯಕರ ಶೆಟ್ಟಿ, ಮೋಹನ್ ಕೆ. ಧರ್ಮಸ್ಥಳದ ಮಹಾವೀರಅಜ್ರಿ, ಸಂತೋಷ್‍ಕುಮಾರ್, ರಾಜೀವರೈ. ಉಪಸ್ಥಿತರಿದ್ದರು.