ಐಪಿಸಿ 124, 124ಎ‌ ದೇಶದ್ರೋಹಿ ಸಂಬಂಧಿ ಕಾಯ್ದೆಯನ್ನು ಸಂಪೂರ್ಣ ಬದಲಾಯಿಸುವವರೆಗೆ ಅದನ್ನು ಸುಪ್ರೀಂ ಕೋರ್ಟು ಶೀತಕದಲ್ಲಿಡಲು ಆಜ್ಞಾಪಿಸಿದೆ.

ಬೇಗ ಪರಿಶೀಲಿಸಿ ಬದಲಿಸುವುದಾಗಿ, ಅಗತ್ಯ ಬಿದ್ದರೆ ಸೂಪರಿನ್‌ಟೆಂಡೆಂಟ್ ಮಟ್ಟಕ್ಕಿಂತ ಮೇಲೆ ಮಾತ್ರ ಬಂಧನ ನಡೆಸುವುದಾಗಿ, ಕಾಯ್ದೆಯು ಅನಗತ್ಯವಾಗಿ ದುರುಪಯೋಗ ಆಗದಂತೆ ನೋಡಿಕೊಳ್ಳುವುದಾಗಿ ಬರೆದು ಕೊಟ್ಟ ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಆರೋಪಿ ಮುಕ್ತವಾಗಿ ತನಗೆ ಸೂಕ್ತ ನ್ಯಾಯ ಪಥ ಅರಸಿಕೊಳ್ಳಲು‌ ಸಹಕರಿಸುವುದಾಗಿ ಹೇಳಿತು.