ಆತ್ರಾಡಿಯಲ್ಲಿ ತಾಯಿ ಚೆಲುವಿ ಹಾಗೂ ಹತ್ತು ವರುಷದ ಮಗಳನ್ನು ಕೊಲೆ ಮಾಡಿದ್ದರ ಸಂಬಂಧ ಪೋಲೀಸರು ಭದ್ರಾವತಿ ಬೊಮ್ಮನಕಟ್ಟೆ ನಿವಾಸಿ 29ರ ಹರೀಶ್ ಎಂಬುವನನ್ನು ಬಂಧಿಸಿದ್ದಾರೆ.

ಚೆಲುವಿಯ ದೂರದ ಸಂಬಂಧಿಯಾದ ಗಂಡನಿಂದ ದೂರವಾಗಿದ್ದ ಆಕೆಗೆ ತನ್ನನ್ನು ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಹಿಂದಿನಿಂದ ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ರೂ. 50,000 ಬೆಲೆಯ ಕತ್ತಿನ ಸರ ಮತ್ತು ಮೊಬಾಯಿಲ್ ತೆಗೆದುಕೊಂಡು ಪರಾರಿಯಾಗಿದ್ದ ಕೊಲೆಗಾರ ಪೋಲೀಸರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.