ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ರಾಮನಗರದ ಗ್ರೇಸ್ ಪ್ರಾರ್ಥನಾ ಮಂದಿರದ ಪಾಸ್ಟಾರ್ ಮತ್ತು ಅವರ ಹೆಂಡತಿಯನ್ನು ಕಾರಟಗಿ ಪೋಲೀಸರು ಬಂಧಿಸಿದ್ದಾರೆ ಎಂದು ಇನ್ಸ್‌ಪೆಕ್ಟರ್ ಸಿದ್ದರಾಮಯ್ಯ ತಿಳಿಸಿದರು.

Iamge Courtesy: News 18Kannada

ಪಾಸ್ಟಾರ್  ಸತ್ಯನಾರಾಯಣ ಮತ್ತವರ ಪತ್ನಿ ಶಿವಮ್ಮ ಅವರು ನೀಡಿದ ಸಾಲಕ್ಕೆ ನಮ್ಮ ಮನೆಯವರನ್ನು ಬಲವಂತವಾಗಿ ಮತಾಂತರ ಮಾಡಿಸಿಕೊಂಡಿದ್ದಾರೆ ಎಂದು ಬುಡ್ಗ ಜಂಗಮ ಸಮಾಜದ ಶಂಕರ ಎನ್ನುವವರು ದೂರು ನೀಡಿದ್ದರು. ಇನ್ನು ಮೇಲೆ ಮನೆಯಲ್ಲಿ ಹಿಂದೂ ದೇವರ ಫೋಟೋ ಇಡಬಾರದು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.