ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ನಮ್ಮದು ತಟಸ್ಥ ನಿಲುವು. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ಮಾಡುವುದೇ ಆದರೆ ಉತ್ತರ ಕರ್ನಾಟಕದ ಲಿಂಗಾಯತ, ಭ್ರಷ್ಟರಲ್ಲದ ಒಬ್ಬರನ್ನು ಮುಖ್ಯಮಂತ್ರಿ ಮಾಡಲಿ ಎಂದು ಕೂಡಲ ಸಂಗಮ ಪಂಚಮಸಾಲಿ ಗುರು ಪೀಠದ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು.

ಮುಖ್ಯಮಂತ್ರಿ ಯಾರಾದರೂ ನಮಗೆ ಅಷ್ಟೆ. ಅದನ್ನು ತೀರ್ಮಾನಿಸುವವರು ಆ ಪಕ್ಷದ ಹೈಕಮಾಂಡ್ ಮಂದಿ. ನೀವು ಕೇಳಿದ್ದಕ್ಕೆ ಉತ್ತರ ಅಷ್ಟೆ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.