ಬೀದರದ ಗ್ರೇಡ್ 1 ತಹಶಿಲ್ದಾರರಾದ ಗಂಗಾದೇವಿ ಸಿ. ಎಚ್. ಅವರು ಜಮೀನಿನ ಮ್ಯುಟೇಶನ್ ಮಾಡಿ ಕೊಡಲು 15 ಲಕ್ಷ ರೂಪಾಯಿ ಲಂಚದಲ್ಲಿ ಒಂದು ಕಂತು‌ ಪಡೆಯುವಾಗ ಬುಧವಾರ ಎಸಿಬಿ ಪೋಲೀಸು ಬಲೆಗೆ ಬಿದ್ದರು.

ಬೀದರ ಹೊರ ವಲಯದ ಚಿದ್ರಿಯ 2 ಎಕರೆ 25 ಗುಂಟೆ ಜಮೀನಿನ ಮ್ಯುಟೇಶನ್‌ಗಾಗಿ 2011ರಲ್ಲಿ ಅರ್ಜಿ ಸಲ್ಲಿಸಿದ್ದರು ಜಮೀನು ಅಮೃತಲಾಲ್ ಪಟೇಲ್.

ಇತ್ತೀಚೆಗೆ ಗಂಗಾದೇವಿ 15 ಲಕ್ಷ ಲಂಚದ ವ್ಯವಹಾರ ಕುದುರಿಸಿ ಅದರಲ್ಲಿ ಒಂದು ಪಾಲು ಮುಂಗಡ ಪಡೆಯುವಾಗ ಎಸಿಬಿ ಪೋಲೀಸರು ‌ಲಂಚದ ಹಣದ ಸಮೇತ ಬಂಧಿಸಿದರು.