ನಂದಾವರ:  ಶ್ರೀ ವೀರ ಮಾರುತಿ ದೇವಸ್ಥಾನದ ಶ್ರೀ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕಿ ಹಾಗೂ ಶ್ರೀ ದೇವರ ರಜತ ಪೀಠ ಪ್ರಭಾವಳಿಗಳನ್ನು ಶ್ರೀ ದೇವರಿಗೆ ಹತ್ತು ಸಮಸ್ತರ ಪರವಾಗಿ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಸುಮಾರು 28 ಕಿಲೋ ಬೆಳ್ಳಿಯನ್ನು ಬಳಸಲಾಗಿದ್ದು , 25 ಲಕ್ಷ ವೆಚ್ಚ ತಗಲಿದ್ದು ಆದಿತ್ಯವಾರ ಶ್ರೀದೇವಳದ  ವೈದಿಕರಿಂದ ವಿಧಿ ವಿಧಾನಪೂರ್ವಕ ಪೂಜೆ ನಡೆದು ಸಮರ್ಪಿಸಲಾಯಿತು .  

ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಡಾ. ಪಿ . ಉಮಾನಂದ ಮಲ್ಯ , ನಂದಾವರ ಉಮೇಶ್ ಭಟ್ , ಹನುಮಂತ್ ಭಟ್ , ವೆಂಕಟೇಶ್ ಮಲ್ಯ , ಲಕ್ಷ್ಮೀನಾರಾಯಣ ಮಲ್ಯ , ಶ್ರೀನಿವಾಸ್ ಕುಡ್ವ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.