ಒನ್ ನೇಶನ್ ಒನ್ ಎಲೆಕ್ಷನ್, ಒನ್ ನೇಶನ್ ಒನ್ ರೇಶನ್ ಎಂದು ಭಾಷಣ ಬಿಗಿಯುವ ಮೋದಿಯವರೆ ಕರ್ನಾಟಕಕ್ಕೆ ಆಮ್ಲಜನಕ, ರೆಮ್ಡೆಸಿವಿರ್ ನೀಡುವಲ್ಲಿ ಒನ್ ನೇಶನ್ ಒನ್ ಜಸ್ಟಿಸ್ ಯಾಕಿಲ್ಲ ಎಂದು ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಪ್ರಶ್ನಿಸಿದ್ದಾರೆ.
ತಲೆ ಮಾಸದ ತೇಜಸ್ವಿ ಸೂರ್ಯನಂಥವರ ಕೈಗೆ ಕೋವಿಡ್ ಜವಾಬ್ದಾರಿ ಕೊಡುವ ಬಿಜೆಪಿ ನಾಯಕರಿಗೆ ತಲೆಯಲ್ಲಿ ಬುದ್ಧಿ ಇದೆಯೇ ಎಂದೂ ಕೇಳಿರುವ ಕಾಂಗ್ರೆಸ್ ಪಕ್ಷದ ಹಿರಿಯರು ಕೂಡಲೆ ಕೊರೋನಾ ನಿವಾರಣಾ ವಿತರಣೆಯಲ್ಲಿ ರಾಜ್ಯಕ್ಕೆ ನ್ಯಾಯಯುತ ಪಾಲು ನೀಡಬೇಕು ಎಂದು ಒತ್ತಾಯಿಸಿದರು.