ನುಡಿ ನಮನ 

ಬಲಿಪ ಮಟ್ಟಿನ ಗತ್ತು ಬೇರಾರು ಕೊಡಲುಂಟೆ

ಒಲಿದ  ಕಂಚಿನ‌ ಕಂಠ ಅವರ ಸೊತ್ತು

ಸೆಳೆದನೇತಕೆ ದೇವ ನಾರಾಯಣನು ಈಗ

ಕಳೆದು ಕೊಳುವಂತೆ ಜನ ಧೀರತಮ್ಮ


ದೊಡ್ಡ ಬಲಿಪರ ಕಂಠ ಆಸ್ವಾದ ಮಾಡಿಹೆನು

ಸಡ್ಡುಹೊಡೆದವರಿವರು ನಾರಾಯಣ

ದಡ್ಡರಲ್ಲದ ಮಗನು ಪರಲೋಕಕೈದಿರಲು

ಒಡ್ಡಿದರೆ ಆತ್ಮವನು ಧೀರತಮ್ಮ


ಬಹಳಷ್ಟು ವೇಳೆಯಲಿ ಅವರಲ್ಲಿ ಹೋಗಿಹೆನು

ಇಹ ಸಮಯ ಅವರಿಗೂ ವೈದ್ಯನಾಗಿ

ಸಹಕಾರಿ ನಗುಮೊಗದ ಎಲೆಯಡಿಕೆ ಬಾಯಲ್ಲಿ

ಸಿಹಿಮಾತ ಭಾಗವತ ಧೀರತಮ್ಮ


ಬಲಿಪರಿಗೆ ಬಲಿಪರೇ ಸಾಟಿ ಎಂಬುದು ಸತ್ಯ

ಕಲಿತು ಬರುವುದೆ ಅವರ ಧಾಟಿ ಎಲ್ಲ

ಸಲಿಸುವೆನು ಶ್ರದ್ಧೆಯಲಿ ನಮನವನು ಈ ಸಮಯ

ನಲುಮೆ ನಾರಾಯಣಗೆ ಧೀರತಮ್ಮ


@ಡಾ ಸುರೇಶ ನೆಗಳಗುಳಿ

ಮುಕ್ತಕ