ಮಂಗಳೂರು: ಶಕ್ತಿನಗರದ ಶಕ್ತಿ ವಸತಿ ಶಾಲೆಯಆಶ್ರಯದಲ್ಲಿ “ಶಕ್ತಿ ಕ್ಯಾನ್‌ಕ್ರಿಯೇಟ್” ಎಂಬ ಶೀರ್ಷಿಕೆಯಲ್ಲಿ ಈಜು ಶಿಬಿರ, ಬೇಸಿಗೆ ಶಿಬಿರ ಹಾಗೂ ಕ್ರಿಕೇಟ್ ಶಿಬಿರವನ್ನು ಏಪ್ರಿಲ್ 01 ರಿಂದಏಪ್ರಿಲ್ 30ರ ತನಕ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಬಹುದಾಗಿದೆ.

ಈಜು ಶಿಬಿರ: ಶಕ್ತಿ ವಸತಿ ಶಾಲೆಯ ಈಜುಕೊಳದಲ್ಲಿ ಏಪ್ರಿಲ್ 01 ರಿಂದಏಪ್ರಿಲ್ 21ರ ತನಕ ಸುಮಾರು 20 ದಿನಗಳ ವರೆಗೆಈಜು ಶಿಬಿರ ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ಮೂರು ವರ್ಷಗಳ ಮೇಲ್ಪಟ್ಟ ಬಾಲಕ, ಬಾಲಕೀಯರು, ಗಂಡಸರು ಹಾಗೂ ಹೆಂಗಸರಿಗೆ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ. ಶಿಬಿರದ ಶುಲ್ಕ 2800/- ನಿಗದಿಪಡಿಸಲಾಗಿದೆ. ಈ ಶಿಬಿರವನ್ನು ಮಂಗಳಾ ಈಜು ತರಬೇತುದಾರರು ನಡೆಸಿಕೊಡಲಿದ್ದಾರೆ. ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಈಜು ತರಬೇತುದಾರರಾದ  ರಾಜೇಶ್‌ ಖಾರ್ವಿ ಇರುತ್ತಾರೆ. 

ಬೇಸಿಗೆ ಶಿಬಿರ: ಶಕ್ತಿ ವಸತಿ ಶಾಲೆಯಲ್ಲಿಏಪ್ರಿಲ್ 10 ರಿಂದಏಪ್ರಿಲ್ 23ರ ತನಕ ಮಂಗಳೂರಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳ ಸಹಕಾರದೊಂದಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಎಲ್.ಕೆ.ಜಿ ಯಿಂದ 10ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಿಬಿರದ ಶುಲ್ಕ ರೂ 3000/- ನಿಗದಿ ಪಡಿಸಲಾಗಿದೆ. ಬೆಳಗ್ಗೆ 9 ಗಂಟೆಯಿAದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯುತ್ತದೆ. ಊಟ, ತಿಂಡಿ ಮತ್ತು ವಾಹನ ವ್ಯವಸ್ಥೆಯನ್ನು ಉಚಿತವಾಗಿಕಲ್ಪಿಸಲಾಗಿದೆ.

    ಈ ಶಿಬಿರದಲ್ಲಿ ಯೋಗ, ಚಿತ್ರಕಲೆ, ಕರಕುಶಲ ಕಲೆ, ವ್ಯಂಗ್ಯಚಿತ್ರ, ಮುಖವಾಡರಚನೆ, ಫೋಮ್‌ಆರ್ಟ್, ವರ್ಲಿಆರ್ಟ್, ಕಾವಿ ಕಲೆ, ಗ್ರೀಟಿಂಗ್‌ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ವೇದಗಣಿತ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವತರಬೇತಿ, ಭಾಷಣ ಕಲೆ, ಸುಂದರ ಕೈ ಬರಹ, ಪೇಪರ್‌ಕಟ್ಟಿಂಗ್, ಲೋಹದಉಬ್ಬು ಶಿಲ್ಪ, ಜಾನಪದ ಹಾಡು, ಕುಣಿತ, ಕಿರುನಾಟಕ, ಕಥೆ ಕೇಳು - ಹೇಳು, ವನ -  ವನ್ಯಜೀವಿಗಳು, ರೇಡಿಯೊ ಸಾರಂಗ್ ಪ್ರಾತ್ಯಕ್ಷಿಕೆ, ಗಾಳಿಪಟ ಹಾರಿಸುವುದು, ಪ್ರವಾಸಇತ್ಯಾದಿ ಚಟುವಟಿಕೆಗಳು ನಡೆಯಲಿದೆ.

    ನಾಡಿನಖ್ಯಾತ ಸಂಪನ್ಮೂಲ ವ್ಯಕ್ತಿಗಳಾಗಿರುವ, ದಯಾ, ಜಾನಚಂದ್ರನ್, ವೀಣಾ ಶ್ರೀನಿವಾಸ್, ಸುಧೀರ್‌ಕಾವೂರು, ರತ್ನಾವತಿಜೆ. ಬೈಕಾಡಿ, ಅರುಣ್‌ಕುಮಾರ್ ಕುಳಾಯಿ, ಪ್ರೇಮನಾಥ ಮರ್ಣೆ, ರಚನಾಕಾಮತ್, ಮುರಳೀಧರ್ ಕಾಮತ್, ನಾದಶ್ರೀ, ಸಪ್ನಾ, ರಚನಾ ಸೂರಜ್, ಸಿಪಾಲಿ ಕರ್ಕೇರ, ಪ್ರಥ್ವಿರಾಜ್, ವಿದ್ಯಾಕಾಮತ್, ರಾಜೇಶ್ವರಿ, ಪ್ರಶಾಂತ್,ಆಶ್ಲೆ, ಸುಂದರ್‌ತೋಡಾರ್, ಸಹನಾ ತೋಡಾರ್ ಮೊದಲಾದವರುತರಬೇತಿ ನೀಡಲಿದ್ದಾರೆ.

ಈ ಶಿಬಿರದ ನಿರ್ದೇಶಕರಾಗಿ ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್.ಜಿ. ಹಾಗೂ ಸಂಯೋಜಕರಾಗಿಚಿತ್ರಕಲಾಅಧ್ಯಾಪಕರಾದ ಪೂರ್ಣೇಶ್‌ ಇರುತ್ತಾರೆ. ಇವರ ಮೊಬೈಲ್ ಸಂಖ್ಯೆ

ಕ್ರಿಕೆಟ್ ಶಿಬಿರ: ಶಕ್ತಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಏಪ್ರಿಲ್ 01 ರಿಂದಏಪ್ರಿಲ್ 30ರ ತನಕ ಸಂಜೆ 4 ಗಂಟೆಯಿAದ 6 ಗಂಟೆಯ ವರೆಗೆ 22 ಯಾರ್ಡ್ಸ್ ಸ್ಕೂಲ್‌ಆಫ್‌ಕ್ರಿಕೆಟ್ ಮಂಗಳೂರು ಇವರತರಭೇತುದಾರರಾದ ಸಾಮ್ಯುಯಲ್‌ಜಯರಾಜ್ ಮತ್ತುರಾಜೇಶ್ ಶೆಟ್ಟಿಇವರ ಮಾರ್ಗದರ್ಶನದಲ್ಲಿ ಈ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ 6 ವರ್ಷ ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಶಿಬಿರದ ಶುಲ್ಕ ರೂ.2500/- ಆಗಿರುತ್ತದೆ. ಈ ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯಅಧ್ಯಾಪಕರಾದ ನಿರ್ಮಿತ್ ಸಾಲ್ಯಾನ್‌ ಇರುತ್ತಾರೆ.

ಈ ಶಿಬಿರದ ನೋಂದಾವಣಿಯನ್ನುಆನ್‌ಲೈನ್‌ವೆಬ್‌ಸೈಟ್‌www.shakthi.edu.in ಮೂಲಕ ಮಾಡಲು ಅವಕಾಶ ಕಲ್ಪಿಸಲಾಗಿದೆ. ನೋಂದಾಣಿ ಮಾಡಲು ಮಾರ್ಚ್ 30 ಕೊನೆಯ ದಿನಾಂಕವಾಗಿರುತ್ತದೆ. ಈ ಶಿಬಿರದ ಯಶಸ್ವಿಗಾಗಿ ಮಾಧ್ಯಮ ಮಿತ್ರರು ಹೆಚ್ಚಿನ ಪ್ರಚಾರ ನೀಡಿ ಸಹಕರಿಸಬೇಕಾಗಿ ಸಂಸ್ಥೆಯ ವತಿಯಿಂದ ವಿನಂತಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಈ ಮೂರು ಶಿಬಿರದ ಸಮಗ್ರ ಮಾಹಿತಿಯ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಶಕ್ತಿ ಎಜ್ಯಕೇಶನ್‌ಟ್ರಸ್ಟ್ನ ಪ್ರಧಾನ ಸಲಹೆಗಾರರಮೇಶ್.ಕೆ, ಅಭಿವೃದ್ಧಿಅಧಿಕಾರಿ ಪ್ರಖ್ಯಾತ್‌ರೈ, ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪ್ರಥ್ವಿರಾಜ್, ಶಕ್ತಿ ವಸತಿ ಶಾಲೆ ಪ್ರಾಂಶುಪಾಲೆ ವಿದ್ಯಾಕಾಮತ್.ಜಿ ಉಪಸ್ಥಿತರಿದ್ದರು.