ಪುತ್ತೂರು: ಹಳ್ಳಿಯತ್ತ ನಮ್ಮಚಿತ್ತ ಎಂಭ ಘೋಷ ವಾಕ್ಯದೊಂದಿಗೆ ಸಂತ ಫಿಲೋಮಿನಾ ಕಾಲೇಜಿನ ಎನ್. ಎಸ್. ಎಸ್  ವಾರ್ಷಿಕ ವಿಶೇಷ ಶಿಬಿರವು ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಕೆದಂಬಾಡಿಯಲ್ಲಿ ಉದ್ಘಾಟನೆಗೊಂಡಿತು. 

ಶ್ರೀ ಕ್ಷೇತ್ರ ಸನ್ಯಾಸಿ ಗುಡ್ಡೆ ಇದರ ಅದ್ಯಕ್ಷರು ಮತ್ತು ಕಾಲೇಜಿನ ಹಿರಿಯ  ವಿದ್ಯಾರ್ಥಿಜೈ ಶಂಕರ್‍ರೈ ಬೆದ್ರುಮಾರು ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಎನ್. ಎಸ್. ಎಸ್ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದು ಯಾವುದೇ ಜಾತಿ ಮತ್ತುಧರ್ಮಕ್ಕೆ ಸೀಮಿತವಾದದ್ದು ಅಲ್ಲ, ರಾಜಕೀಯ ಅಭಿಮತಗಳಿಂದಲೂ ಮುಕ್ತವಾಗಿದೆ, ರಾಷ್ಟ್ರಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದ್ದು, ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ವಿದ್ಯಾ ಸಂಸ್ಥೆಗೆಕರ್ತವ್ಯ ಬದ್ಧತೆಯಿಂದ ತಮ್ಮ ಕೊಡುಗೆ ನೀಡಬೇಕು ಮತ್ತು ಜನಪರ ಕಾಳಜಿಯ ಕೆಲಸವನ್ನು ಮಾಡುವ ಅಭಿರುಚಿಯನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳಬೇಕು, ಇಂಥ ಉದಾತ್ತಗುಣವನ್ನು ಪ್ರೇರಿಸುವಲ್ಲಿ ಎನ್‍ಎಸ್‍ಎಸ್ ಕೊಡುಗೆ ಮುಖ್ಯವೆಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ ಡಿ.ವೈ.ಎಸ್.ಪಿ ಶಾಂತರಾಮ ರೈ ಮುಂಡಲಾಗುತ್ತು, ಕೆದಂಬಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷ ಮತ್ತು ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿಯಾದರತನ್ ರೈ ಕುಂಬ್ರ , ಶಾಲೆಯ ಮುಖ್ಯ ಶಿಕ್ಷಕಿ ನಾಗವೇಣಿ ಕೆ. ವಿದ್ಯಾರ್ಥಿಗಳ ಜೀವನಕ್ಕೆ ಮತ್ತು ಎನ್‍ಎಸ್‍ಎಸ್ ಶಿಬಿರಕ್ಕೆ ಶುಭ ಹಾರೈಸಿದರು. 

ಕಾರ್ಯಕ್ರ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಎನ್‍ಎಸ್‍ಎಸ್ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿ ಸಾಮಾಜಿಕ ಸಹಿಷ್ಣುತೆಯ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ,  ಪಾಠಕ್ಕೆ ಎಷ್ಟು ಗಮನ ಹರಿಸಬೆಕೋ, ಅಷ್ಟೇ ಗಮನವನ್ನು  ವ್ಯಕ್ತಿತ್ವರೂಪಿಸುವ  ಪಠ್ಯೇತರ ಚಟುವಟಿಕೆಗಳ ಕಡೆಗೂ ನೀಡಬೇಕು,  ವಿದ್ಯಾರ್ಥಿ ಜೀವನವೆನ್ನುವುದು ಭವಿಷ್ಯದ ವ್ಯಕ್ತಿತ್ವವನ್ನು ರೂಪಿಸುವ ಕ್ಷಣಗಳು ಮತ್ತು ಜ್ಞಾನ ಮತ್ತು ಸಂಸ್ಕಾರದ ವೃದ್ಧಿಗೆ ಆಸ್ಪದ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಊರಿನ ಹಲವು ಗಣ್ಯರು, ಶಿಬಿರದ ಇನ್ನೋರ್ವ ಯೋಜನಾಧಿಕಾರಿ ಪುಷ್ಪ ಏನ್ ಮತ್ತು ಸಹ ಶಿಬಿರಾಧಿಕಾರಿಗಳಾದ ಅಭಿಷೇಕ್ ಸುವರ್ಣ, ಸಹಾಯಕ ಪ್ರಾದ್ಯಾಪಕರು ವ್ಯವಹಾರ ಆಡಳಿತ ವಿಭಾಗ ಮತ್ತು ಜೇಸ್ಲಿನ್ ಡಿಕುನ್ಹಾ ಸಹಾಯಕ ಪ್ರಾದ್ಯಾಪಕರು ವಾಣಿಜ್ಯಶಾಸ್ತ್ರ ವಿಭಾಗ ಉಪಸ್ಥಿತರಿದ್ದರು. 

ಎನ್ ಎಸ್ ಎಸ್ ಅಧಿಕಾರಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ  ವಾಸುದೇವ ಎನ್  ಸ್ವಾಗತಿಸಿದರು. ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ ರಾಧಾಕೃಷ್ಣ ಗೌಡ ವಂದಿಸಿದರು. ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.