ಉಜಿರೆ: ಧರ್ಮಸ್ಥಳದಲ್ಲಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಹತ್ತನಾವಧಿ ನಿಮಿತ್ತರಂಗ ಪೂಜೆ, ಉತ್ಸವ, ದರ್ಶನಬಲಿ, ಧ್ವಜಮರ ಇಳಿಸುವುದು ಮೊದಲಾದ ಧಾರ್ಮಿಕ ಪ್ರಕ್ರಿಯೆಗಳು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದವು.

    ಇನ್ನು ದೀಪಾವಳಿ ಹಬ್ಬದ ಬಳಿಕ ದೇವಸ್ಥಾನದಲ್ಲಿ ಉತ್ಸವ, ರಂಗಪೂಜೆ ಮೊದಲಾದ ವಿಶೇಷ ಸೇವೆಗಳು ನಡೆಯುತ್ತವೆ.

    ಧರ್ಮಸ್ಥಳ ಮೇಳದವರು ಮೂರು ದಿನ ಸೇವೆ ಬಯಲಾಟ ಪ್ರದರ್ಶನ ನೀಡಿ ಈ ವರ್ಷದ ಬಯಲಾಟ ಸೇವೆ ಮುಕ್ತಾಯಗೊಳ್ಳುತ್ತದೆ.

    ಮುಂದೆ ನವಂಬರ್ ಬಳಿಕ ಕಾಲಮಿತಿಯಕ್ಷಗಾನ ಬಯಲಾಟ ಸೇವೆ ಪ್ರಾರಂಭಗೊಳ್ಳಲಿದೆ.