ಜುಲೈ 25 ರಂದು ಯುವಜನರ ಪರವಾಗಿ ಮೌನ ಮೇಣದಬತ್ತಿ ಪ್ರಾರ್ಥನಾ ಪ್ರತಿಭಟನೆ

ಮಂಗಳೂರು: ಯುವಜನರ ಭವಿಷ್ಯ, ನ್ಯಾಯ ಹಾಗೂ ಪಾರದರ್ಶಕತೆಯ ಪರವಾಗಿ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಜುಲೈ 25, 2026 ರಂದು ಸಂಜೆ 6:00 ಗಂಟೆಗೆ ಸೇಂಟ್ ಸೆಬಾಸ್ಟಿಯನ್ ಚರ್ಚ್ ಗೇಟ್ ಬಳಿ, ಬೆಂದೂರು ವತಿಯಿಂದ “We Are There for the Youth” ಎಂಬ ಸಂದೇಶದೊಂದಿಗೆ ಮೌನ ಮೇಣದಬತ್ತಿ ಪ್ರಾರ್ಥನಾ ಪ್ರತಿಭಟನೆ ಆಯೋಜಿಸಲಾಗಿದೆ.

ಇದು ಸಂಪೂರ್ಣ ಶಾಂತಿಯುತ ಕಾರ್ಯಕ್ರಮವಾಗಿದ್ದು, ಯುವಜನರ ನ್ಯಾಯಯುತ ಹಕ್ಕುಗಳು ಹಾಗೂ ಭವಿಷ್ಯದ ಪರವಾಗಿ ಒಗ್ಗಟ್ಟಿನ ಸಂದೇಶ ನೀಡುವುದು ಇದರ ಉದ್ದೇಶವಾಗಿದೆ.

Deepak D’souza
7619651669

Leave a Reply

Your email address will not be published. Required fields are marked *