ಮೂಡಬಿದಿರೆ: ದಕ್ಷಿಣ ಕನ್ನಡ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನಲ್ಲಿ ಜರುಗಿದ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ಹುಡುಗರ ವಿಭಾಗದಲ್ಲಿ 04 ಚಿನ್ನ 02 ಬೆಳ್ಳಿ ಹಾಗೂ 03 ಕಂಚಿನೊಂದಿಗೆ ಒಟ್ಟು 09 ಪದಕ ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು.
ಹುಡುಗಿಯರ ವಿಭಾಗದಲ್ಲಿ 05 ಚಿನ್ನ 04 ಬೆಳ್ಳಿ ಹಾಗೂ 01 ಕಂಚಿನೊಂದಿಗೆ ಒಟ್ಟು 10 ಪದಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದುಕೊಂಡರು.



ಹುಡುಗರ ವಿಭಾಗದಲ್ಲಿ : 57 ಕೆಜಿ – ಪ್ರಥ್ವಿರಾಜ್ (ಪ್ರಥಮ), 61 ಕೆಜಿ – ಆಕಾಶ್ (ದ್ವಿತೀಯ), 65 ಕೆಜಿ – ಅನೂಪ್ (ದ್ವಿತೀಯ), 70 ಕೆಜಿ – ಪ್ರಣವ್ (ಪ್ರಥಮ), ರೋಹನ್ ಎಸ್ (ತೃತೀಯ), 74 ಕೆಜಿ – ರಜತ್ ಬಸು (ಪ್ರಥಮ), 86 ಕೆಜಿ – ರಿತ್ವಿಕ್ (ಪ್ರಥಮ), 92 ಕೆಜಿ – ಮಹಮ್ಮದ್ ಶಿಹಾಮ್ ಶಬೀರ್ (ತೃತೀಯ), 97+ ಕೆಜಿ – ಕಾರ್ತಿಕ್ (ತೃತೀಯ)
ಹುಡುಗಿಯರ ವಿಭಾಗದಲ್ಲಿ : 50 ಕೆಜಿ – ತನುಶ್ರೀ (ದ್ವಿತೀಯ), 53 ಕೆಜಿ – ಸಿಂಚನಾ (ದ್ವಿತೀಯ), 55 ಕೆಜಿ – ಗಂಗಮ್ಮ (ಪ್ರಥಮ), 57 ಕೆಜಿ – ಚಾರ್ವಿ (ತೃತೀಯ), 59 ಕೆಜಿ – ದೀಪ್ತಿ (ಪ್ರಥಮ), 62 ಕೆಜಿ – ತೇಜಸ್ವಿನಿ (ಪ್ರಥಮ), 65 ಕೆಜಿ – ಸ್ಪೂರ್ತಿ (ಪ್ರಥಮ), 68 ಕೆಜಿ – ಚೈತ್ರಾ (ದ್ವಿತೀಯ), 72 ಕೆಜಿ – ತ್ರಿಪಾ (ದ್ವಿತೀಯ), 76 ಕೆಜಿ – ನವ್ಯಶ್ರೀ (ಪ್ರಥಮ) ಪಡೆದುಕೊಂಡಿರುತ್ತಾರೆ.
ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
