ವರದಿ ರಾಯಿ ರಾಜ ಕುಮಾರ
ಮೂಡುಬಿದಿರೆಯಲ್ಲಿ ಜನವರಿ 31 ಹಾಗೂ ಫೆಬ್ರವರಿ 1 ರಂದು ನಡೆಯುತ್ತಿರುವ 32ನೇ ವರ್ಷದ ಕೋಟಿ ಚೆನ್ನಯ್ಯ ಜೋಡು ಕರೆ ಕಂಬಳಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್ವಿ ದೀಪಾವಳಿಗೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಪರಂಪರೆಯನ್ನು ಉಳಿಸುವ ಕೆಲಸ ಕಂಬಳಿದಿಂದ ನಡೆಯುತ್ತಿದೆ. ಅದಕ್ಕಾಗಿ ಸಂಘಟಗರಿಗೆ ಶುಭಾಶಯಗಳು ತಿಳಿಸಿ ಕಂಬಳದಿಂದ ಆರ್ಥಿಕ ಬೆಳವಣಿಗೆಯು ಸಾಧ್ಯ ಇದೆ ಎಂದು ನೆನಪು ಮಾಡಿಕೊಂಡರು.



ರಾಣಿ ಅಬ್ಬಕ್ಕರ ವಿಶೇಷ ಅಭಿಯಾನದೊಂದಿಗೆ ಹಲವಾರು ಪ್ರಗತಿಪರ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಸಂಘಟಕರಿಗೆ ಶುಭಾಶಯಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಜವಾನೆರ್ ಬೆದ್ರ ಸಂಘಟನೆಯ ಸಂಸ್ಥಾಪಕ ಅಮರಕೋಟೆ ಅವರಿಗೆ ಸಾಮಾಜಿಕ ಅಭಿವೃದ್ಧಿ ಪರ ಕಾರ್ಯಕ್ಕಾಗಿ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.
