ಮಂಗಳೂರು: ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಘಟಕದ ವತಿಯಿಂದ ಕುದ್ಮುಲ್ ರಂಗರಾವ್ ಅವರ 165ನೇ ಜನ್ಮದಿನ ಕಾರ್ಯಕ್ರಮ ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಬ್ಲಾಕ್ ಕಾಂಗ್ರೆಸ್ ಪ್ರಕಾಶ್ ಸಾಲ್ಯಾನ್, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ, ಡಿಸಿಸಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮ.ನ.ಪಾ ಸದಸ್ಯರಾದ ಸತೀಶ್ ಪೆಂಗಲ್, ಚೇತನ್ ಕುಮಾರ್, ತನ್ವೀರ್ ಶಾ, ಮುಖಂಡರಾದ ಗಿರೀಶ್ ಶೆಟ್ಟಿ, ರಾಕೇಶ್ ದೇವಾಡಿಗ, ನೆಲ್ಸನ್ ಮೊಂತೇರೊ, ರೂಪ ಚೇತನ್, ವಸಂತಿ, ಅನುಪಮಾ ರಘುವೀರ್, ರವಿಚಂದ್ರ, ಪ್ರತಾಪ್ ಸಾಲ್ಯಾನ್, ಸುರೇಂದ್ರ, ಪ್ರೇಮ್ ಬಳ್ಳಾಲ್ ಭಾಗ್, ಸುರೇಶ್ ನಂತೂರ್, ನಮಿತ್, ಸದಾಶಿವ ಬಲಿಪತೋಟ, ಲೋಲಾಕ್ಷಿ, ಪದ್ಮಾವತಿ ಪೆರ್ಲ, ಪುಷ್ಪ ಅಮರ್ ನಾಥ್, ರಮೇಶ್ ಕೋಟ್ಯಾನ್, ದೇವೇಂದ್ರ ಕಾಪಿಕಾಡ್, ಸಂಜೀವ ಬೆಂಜನಪದವು ಉಪಸ್ಥಿತರಿದ್ದರು.

ಬ್ಲಾಕ್ ಪರಿಶಿಷ್ಟ ಘಟಕಾಧ್ಯಕ್ಷ ದಿನೇಶ್ ಬಲಿಪತೋಟ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ದಡ್ಡಲ್ ಕಾಡ್ ವಂದಿಸಿದರು. ಕಿರಣ್ ಕುಮಾರ್ ನಿರೂಪಿಸಿದರು.