ಮಂಗಳೂರು: ಅನೇಕ ವರ್ಷಗಳ ಬೇಡಿಕೆಯಾಗಿರುವ ಕರಾವಳಿ ಹೈಕೋರ್ಟ್ ಸಂಚಾರಿ ಪೀಠ ರಚನೆ ಮಾಡಬೇಕು ಮತ್ತು ನ್ಯಾಯವನ್ನು ಕಡಿಮೆ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಜನರಿಗೆ ಕರಾವಳಿ ಭಾಗದಿಂದ ಬೆಂಗಳೂರಿಗೆ ತೆರಳಿ ಸಂಚಾರಿ ಹೈಕೋರ್ಟ್ನಿಂದ ನ್ಯಾಯವನ್ನು ಪಡೆದು ವಿಳಂಬವಾಗುವುದು ಖರ್ಚು-ವೆಚ್ಚಗಳು ಮತ್ತು ಸಮಯದ ಅವಧಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅನೇಕ ವಿಧಗಳಲ್ಲಿ ಸಹಕಾರಿಯಾಗುವ ನಿಟ್ಟಿನಲ್ಲಿ ಜನಸಾಮಾನ್ಯರ ಹಕ್ಕಿನ ಬೇಡಿಕೆಯಾಗಿರುವ ಹೈಕೋರ್ಟ್ ಪೀಠ ರಚನೆ ಮಾಡಬೇಕೆಂಬ ಈಗಾಗಲೇ ಕೆಲವೇ ದಿನಗಳಲ್ಲಿ ಪೀಠದ ಸ್ಥಾಪನೆಯ ಬಗ್ಗೆ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕೆಂಬ ಮಾರ್ಗದರ್ಶನದಂತೆ ಐವನ್ ಡಿಸೋಜಾರವರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸರಕಾರದ ನಿರ್ದೇಶನದಂತೆ ಕೂಡಲೇ ಮೂಲಭೂತ ಸೌಕರ್ಯ ಒದಗಿಸಿಕೊಡಬೇಕೆಂದು ಚರ್ಚೆ ನಡೆಸಿದರು.


ಸಂಚಾರಿ ಪೀಠಕ್ಕೆ ಮುಖ್ಯವಾಗಿ ನಾಲ್ಕು ನ್ಯಾಯಾದೀಶರುಗಳು ಉಳಿದುಕೊಳ್ಳಲು ಮೂಲಭೂತ ಸೌಕರ್ಯದ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ವಿಸ್ತಾರವಾದ ಚರ್ಚೆ ನಡೆಯಿತು. ನಿನ್ನೆ ಮಾನ್ಯ ಶಾಸಕರು ಮಂಗಳೂರಿನಲ್ಲಿರುವ 165 ಸರಕಾರಿ ಪಾಳು ಬಿದ್ದಿರುವ ವಸತಿಗೃಹಗಳಿಗೆ ಭೇಟಿ ನೀಡಿದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸಿ, ಪಾಳು ಬಿದ್ದಿರುವ ವಸತಿಗೃಹಗಳನ್ನು ಮತ್ತೆ ವಶಕ್ಕೆ ಪಡೆದುಕೊಂಡು ಉಪಯೋಗ ವಾಗುವಂತೆ ಮಾಡಬೇಕು ಮತ್ತು ಸರಕಾರದ ಹಣವನ್ನು ಪೋಲು ಮಾಡಬಾರದು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತರಾಗಿದ್ದು, ಅಧಿಕಾರಿಗಳ ಒಂದು ಸಮಿತಿಯನ್ನು ರಚಿಸಬೇಕೆಂದು ಐವನ್ ಡಿʼಸೋಜಾರವರು ಮನವಿ ಮಾಡಿದರು ಈ ಮನವಿಯನ್ನು ವಿವಿಧ ಇಲಾಖಾ ವತಿಯಿಂದ ಕ್ರಮ ಕೈಗೊಳ್ಳುವುದದಾಗಿ ಶಾಸಕರಿಗೆ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಎಚ್ .ವಿ ರಾಘವೇಂದ್ರ ಜೊತೆಗಿದ್ದರು.
