ನಮ್ಮಲ್ಲೊಂದು ಮಾತುಂಟು ಬೋರ್ ಕಲ್ಲ ಮೇಲೆ ಮಳೆ ಸುರಿದಂತೆ ಎಲ್ಲಾ ಕಾಯಿಲೆಗಳು ನಮಗೆ ಏಕೆ ಬರುತ್ತೆ ಎಂದು ಇದು ಪ್ರಕೃತಿಯಲ್ಲಿ ಗಿಡಮರಗಳನ್ನು ಬಿಟ್ಟಿಲ್ಲ ಇಲ್ಲಿ ಫಸಲನ್ನು ಈ ರೋಗ ನಾಶಮಾಡುತ್ತದೆ ಫಂಗಸ್, ವೈರಸ್, ನಂಜು ರೋಗ ಹೀಗೆ ಸರ್ವೇಸಾಮಾನ್ಯ ಕೆಲವು ತನ್ನಿಂದ ತಾನೇ ನಿಯಂತ್ರಣಕ್ಕೆ ಬರುತ್ತದೆ ಇನ್ನು ಕೆಲವಕ್ಕೆ ಔಷಧಿ ಬಳಕೆ ನಮ್ಮಲ್ಲೂ ಜಾಂಡಿಸ್ ಹಳದಿ ರೋಗ ಇಂದೇ ಈ ಕಾಯಿಲೆ ಕರೆಯುವುದು ರೂಡಿ.

ಬೆಂಡೆಕಾಯಿ ಗಿಡಕ್ಕೆ ಹಳದಿ ರೋಗ ಬಂದಾಗ ಕಿತ್ತು ಬಿಸಾಡುವುದೇ ಅಥವಾ ಸುಟ್ಟು ನಾಶ ಮಾಡುವುದೇ ಇದಕ್ಕೆ ಪರಿಹಾರ ಏನಂತೀರಾ ಪ್ರಕೃತಿಯ ಸೋಜಿಗವಲ್ಲವೇ ಈ ಕಾಯಿಲೆಯ ನಿವಾರಣೆಗೆ ಮನುಷ್ಯರಿಗೆ ಆಯುರ್ವೇದ ಆಲೋಪತಿ ಹೀಗೆ ಪಥ್ಯ, ಗುಳಿಗೆ, ಕಷಾಯ ಅಲ್ಲದೇ ಹಲಸಿನ ಮರದ ಕೆಳಗೆ ಹತ್ತಿರವು ಸುಳಿಯಬಾರದು ಎಂಬಂತ ನಿಲುವುಗಳಿವೆ.
ಇದು ರೋಗ ಸಾಮಾನ್ಯವಾಗಿದ್ದಾಗ ಮಾತ್ರ ಇನ್ನು ಲಿವರ್ ಮೇದೋಜೀರಕ ಗ್ರಂಥಿಯ ತೊಂದರೆಯಿಂದ ಬಂದಾಗಂತೂ ಪರಿಹಾರಕ್ಕೆ ಪರಿಹಾರ ಕೈಮೀರಿ ಹೋಗಿರುತ್ತದೆ ನಾವು ಕಾಯಿಲೆ ಬಂದಾಗ ದೇವರ ಮುಂದೆ ತಮ್ಮ ಅಳಲನ್ನು ಹೇಳಿಕೊಳ್ಳುತ್ತೇವೆ.
ಆದರೆ ಪ್ರಕೃತಿ ಗಿಡ ಮರ ಬಳ್ಳಿಗಳು ಏನು ಮಾಡಲು ಸಾಧ್ಯವಲ್ಲವೇ…?
